ನ್ಯೂಜ್ ಡೆಸ್ಕ್:ಪರಮಾತ್ಮ ಮಹಾಶಿವನು ವಿರಾಜಮಾನನಾಗಿ ನೆಲೆಸಿರುವ ಅತ್ಯಂತ ಪವಿತ್ರವಾದ ಸ್ಥಳವಾಗಿರುವ ವಾರಣಾಸಿ ಕಾಶಿಯಲ್ಲಿ ಸೂರ್ಯಾಸ್ತಮಾನದ ಬಳಿಕ ಗಂಗಾ ನದಿ ತೀರದಲ್ಲಿ ನಡೆಯುವ ಗಂಗಾ ಆರತಿಯನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎಂಬುದು ಬಹುತೇಕ ಹಿಂದೂಗಳ ಕನಸು ಗಂಗಾ ನದಿ ತೀರದಲ್ಲಿ ಸಂಜೆ ಡಮರುಗ, ಶಂಖನಾದ ಹಾಗೂ ಗಂಗೆಯ ಕೀರ್ತನೆಯಲ್ಲಿ ನಡೆಯುವ ಆರತಿ ನೋಡುಗರನ್ನು ಭಕ್ತಿಪರವಶವಾಗುವಂತೆ ಮಾಡುತ್ತದೆ ಇದನ್ನು ಕಣ್ತುಂಬಿಕೊಳ್ಳಲು ದೇಶ- ವಿದೇಶದಿಂದ ಭಕ್ತರು ಆಗಮಿಸುತ್ತಾರೆ ವೈವಿದ್ಯಮಯವಾಗಿ ನಡೆಯುತ್ತಿದ್ದ ಗಂಗಾ ಆರತಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ
ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ಹೋಗುತ್ತಿರುವ ಭಕ್ತರು ಅಲ್ಲಿಂದ ಕಾಶಿ ವಿಶ್ವನಾಥ ದೇವಸ್ಥಾನವನ್ನು ನೋಡಲು ಹೋಗುತ್ತಿದ್ದಾರೆ ಪರಿಣಾಮ ವಾರಣಾಸಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು ಜನದಟ್ಟಣೆ ದಿನೆ ದಿನೆ ಹೆಚ್ಚಾಗುತ್ತಿದ್ದು ನಿತಂತ್ರಣಕ್ಕೆ ಸಮಸ್ಯೆ ಆಗುತ್ತಿರುವ ಹಿನ್ನಲೆಯಲ್ಲಿ ಗಂಗಾ ತಟದ ಘಾಟ್ಗಳಲ್ಲಿ ನಡೆಯುತ್ತಿದ್ದ ‘ಗಂಗಾ ಆರತಿ’ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗಂಗಾ ಆರತಿ ಇರಲ್ಲ ಘಾಟ್ ಗಳ ಬಳಿ ಬರಬೇಡಿ
ದಶಾಶ್ವಮೇಧ ಘಾಟ್ನಲ್ಲಿ ನಡೆಯುವ ಗಂಗಾ ಆರತಿ ಫೆಬ್ರವರಿ 5 ರವರೆಗೆ ಸಾರ್ವಜನಿಕರಿಗೆ ಸ್ಥಗಿತಗೊಳಿಸಲಾಗಿದೆ ಎಂದು ಗಂಗಾ ಸೇವಾ ನಿಧಿ ಅಧ್ಯಕ್ಷ ಸುಶಾಂತ್ ಮಿಶ್ರಾ ಶುಕ್ರವಾರ ತಿಳಿಸಿದ್ದಾರೆ. ಇದಲ್ಲದೆ, ಶೀತ್ಲಾ ಘಾಟ್, ಅಸ್ಸಿ ಘಾಟ್ ಮತ್ತು ಇತರ ಘಾಟ್ಗಳಲ್ಲಿ ಗಂಗಾ ಆರತಿ ಮಾಡುವ ಸಮಿತಿಗಳು ಸಹ ಫೆಬ್ರವರಿ 5 ರವರೆಗೆ ಸಾರ್ವಜನಿಕರು, ಮತ್ತು ಭಕ್ತರು ಘಾಟ್ಗಳ ಬಳಿಗೆ ಬಾರದಂತೆ ಮನವಿ ಮಾಡಲಾಗಿದೆ.
Breaking News
- ಕಾಶಿಯಲ್ಲಿ ನಡೆಯುತ್ತಿದ್ದ ಗಂಗಾಹಾರತಿ ಸದ್ಯಕ್ಕೆ ಸ್ಥಗಿತ!
- ಹೃದಯ ವಿದ್ರಾಯಕ:ತಂದೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ ದುಷ್ಟ ಮಗ!
- ಶ್ರೀನಿವಾಸಪುರ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಹ್ಯಾಟ್ರಿಕ್ ಬಾರಿಸಿದ ಅಶೋಕ್
- ಚಿಂತಾಮಣಿ ಕಲಾವಿದೆ ರಶ್ಮಿ ಅರಳಿಸಿದ ರಾಮಂದಿರಕ್ಕೆ ತೋಟಗಾರಿಕೆ ಪ್ರಶಸ್ತಿ!
- ಶ್ರೀನಿವಾಸಪುರ ಹೈವೆ ಪುಟ್ ಪಾತಲ್ಲಿ ವಾಹನ ಗ್ಯಾರೆಜ್,ಕೊಂಪೆಯಂತಾದ ರಸ್ತೆ!
- ಶ್ರೀನಿವಾಸಪುರ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಪಂಚಾಯಿತಿ CEO ಡಾ.ಪ್ರವೀಣ್.
- ಅಂಬಿಗರ ಚೌಡಯ್ಯ ತತ್ವಾದರ್ಶ ಇಂದಿಗೂ ಪ್ರಸ್ತುತ ತಹಶೀಲ್ದಾರ್ ಸುಧೀಂದ್ರ
- ಕಲ್ಲೂರಿನಲ್ಲಿ ಶಾಸಕ ವೆಂಕಟಶಿವಾರೆಡ್ಡಿ BIRTHDAY ಕಾರ್ಯಕ್ರಮ
- ರಾಯಲ್ಪಾಡು ಒಂಟಿಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರ ಬಂಧನ
- ಶ್ರೀನಿವಾಸಪುರದಲ್ಲಿ ವೈದೇಹಿ ಆಸ್ಪತ್ರೆಯಿಂದ ನಡೆದ ಆರೋಗ್ಯ ಶಿಬಿರ
Sunday, February 2