ಚಿಂತಾಮಣಿ:ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಜೀವವಾಗಿ ಸುಟ್ಟು ಕರಕಲರಾಗಿದ್ದು ಇತರೆ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಂತಾಮಣಿ-ಮದನಪಲ್ಲಿ ರಸ್ತೆಯಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಲ್ಲಿ ಹಾಗು ಜೋಗ್ಯಾನಹಳ್ಳಿ ಗೆಟ್ ನಡುವೆ ಭಾನುವಾರ ನಡು ಮಧ್ಯಾನಃ ನಡೆದಿದೆ.
ಕಡಪಾದಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದ ಕುಟುಂಬ.
ಬೆಂಗಳೂರಿನಿಂದ ತಿರುಪತಿಗೆ ಹೋಗುವ ಖಾಸಗಿ ಬಸ್ ಭಾರತಿ ಸರ್ವಿಸ್ ಚಿಂತಾಮಣಿ-ಮದನಪಲ್ಲಿ ರಸ್ತೆಯಲ್ಲಿ ಎದುರಿಗೆ ಅತಿ ವೇಗವಾಗಿ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಹಳ್ಳಕ್ಕೆ ಉರಳಿ ಬಿದ್ದಿದೆ ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ಏಕಾ ಏಕಿ ಬೆಂಕಿ ಹೊತ್ತಿಕೊಂಡಿದೆ ಇದರಿಂದಾಗಿ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸಜೀವವಾಗಿ ಸುಟ್ಟುಹೋಗಿದ್ದಾರೆ.
ಅಪಘಾತದಲ್ಲಿ ಸಜೀವವಾಗಿ ಸುಟ್ಟು ಮೃತಪಟ್ಟವರನ್ನು ಆಂಧ್ರದ ಕಡಪ ಮೂಲದ ಧನಂಜಯರೆಡ್ಡಿ(45)ಅವರ ತಾಯಿ ಕಳಾವತಿ(62)ಎಂದು ಗುರುತಿಸಲಾಗಿದೆ.
ತೀವ್ರವಾಗಿ ಗಾಯಗೊಂಡಿರುವ ಶೋಭಾ(29 ವರ್ಷ)ಮಹಾಲಕ್ಷ್ಮಿ(60)ಮನ್ವಿತ್ (3ವರ್ಷ) ಸೇರಿದಂತೆ ಮೃತಪಟ್ಟ ಇಬ್ಬರು ಒಟ್ಟು ಐವರು ವ್ಯಕ್ತಿಗಳು ಒಂದೇ ಕುಟುಂಬದವರಾಗಿದ್ದು ಇವರೆಲ್ಲರೂ ಬೆಂಗಳೂರಿನಲ್ಲಿ ವಾಸವಿದ್ದು ಊರಿಗೆ ಬಂದಿದ್ದು ವಾಪಸ್ಸು ಬೆಂಗಳೂರಿಗೆ ಹೋಗುವಾಗ ಅಪಘಾತ ಆಗಿದೆ.
ಘಟನೆ ಮಾಹಿತಿ ತಿಳಿದ ತಕ್ಷಣ ಜಿಲ್ಲಾ ರಕ್ಷಣಾಧಿಕಾರಿ ಕುಶಾಲ್ ಚೌಕ್ಸೆ,ಅಡಿಷನಲ್ ಎಸ್ಪಿ ರಜಾ ಇಮಾಮ್ ಖಾಸಿಂ,ಚಿಂತಾಮಣಿ ಡಿವೈಎಸ್ಪಿ ಮುರಳಿಧರ್,ಸರ್ಕಲ್ ಇನ್ಸ್ಪೆಕ್ಟರ್ ವೆಂಕಟರವಣಪ್ಪ,ಸಬ್ ಇನ್ಸ್ಪೆಕ್ಟರ್ ಶಿವರಾಜ್, ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Breaking News
- ಮಾಲೂರಿನ ಬೈರನದೊಡ್ಡಿ ನಗರೇಶ್ವರ ದೇವಾಲಯ ಲೋಕಾರ್ಪಾಣೆ
- ಚಿಂತಾಮಣಿ-ಮದನಪಲ್ಲಿ ರಸ್ತೆ ಖಾಸಗಿ ಬಸ್ ಡಿಕ್ಕಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ!
- ಅವಿಭಜಿತ ಕೋಲಾರ ಜಿಲ್ಲೆಯ ರೈತರಿಗೆ ನಿರಾಶದಾಯಕ ಬಜೆಟ್ ಎಲ್ಲೆಡೆ ಟೀಕೆ!
- ಮಾವುಬೆಳೆಗಾರರಿಗೆ ಏನೂ ಘೊಷಿಸದ ಸಿದ್ದರಾಮಯ್ಯ sweet 16 ಬಡ್ಜೆಟ್.
- ಶ್ರೀನಿವಾಸಪುರ ಜನರಿಂದ ಸಿದ್ದರಾಮಯ್ಯ ಬಜೆಟ್ ಮೇಲೆ ಭಾರೀ ನೀರಿಕ್ಷೆ!
- ಜೆಡಿಎಸ್ CMR ಶ್ರೀನಾಥ್ ಮನೆಗೆ ಪೇಜಾವರ ಸ್ವಾಮಿಜಿ ಭೇಟಿ!
- ಬುಲೆಟ್ ಬೈಕುಹತ್ತಿ ಪೋಲಿರೈಡ್ ಮಾಡಿದ್ದ LOVER ಬಂಧನ!
- ಕಾಂಗ್ರೆಸ್ ಮಂತ್ರಿ ವಿರುದ್ದ ಅರಣ್ಯ ಭೂಮಿ ಒತ್ತುವರಿ ಆರೋಪ
- ಶ್ರೀನಿವಾಸಪುರ:ವಿಧವೆ ಮನೆಶೆಡ್ ಕಾಂಪೌಂಡ್ ದೌರ್ಜನ್ಯದಿಂದ ಧ್ವಂಸ ಆರೋಪ
- ಶ್ರೀನಿವಾಸಪುರ:ಶಿವರಾತ್ರಿ ಸಂಭ್ರಮ ಅರಕೇರಿ ನಾಗನಾಥೇಶ್ವರನಿಗೆ ರಥೋತ್ಸವ
Wednesday, March 12