ಶ್ರೀನಿವಾಸಪುರ:ಕಿಡಿಗೇಡಿಗಳು ಹಾಕಿದ ಬೆಂಕಿಗೆ ಮೊಬೈಲ್ ಅಂಗಡಿಗಳ ಸೈನ್ ಬೋರ್ಡ್ ಸೇರಿದಂತೆ ನಾಮಫಲಕಳು ವಿದ್ಯತ್ ತಂತಿಗಳು ಸುಟ್ಟು ಕರಕಲಾಗಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಜೆ.ಸಿ.ರಸ್ತೆಯ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿರುವ ರಜನಿ ಮೋಬೈಲ್ ಅಂಗಡಿಯಲ್ಲಿ ನಡೆದಿದ್ದು ಅದೃಷವತ್ ಪ್ರಾಣ ಹಾನಿಯಂತಹವು ನಡೆದಿಲ್ಲ ಸಮಯಕ್ಕೆ ಅಗ್ನಿ ಶಾಮಕ ದಳ ಕಾರ್ಯಚರಣೆ ನಡೆಸಿದ ಪರಿಣಾಮ ದೊಡ್ದ ಮಟ್ಟದ ನಷ್ಟ ಸಹ ಆಗಿರುವುದಿಲ್ಲ.
ಜೆ.ಸಿ.ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಮಹಡಿ ಏರಲು ಇರುವಂತ ಮೆಟ್ಟಿಲ ಕೆಳಗೆ ಹಣ್ಣುಗಳ ಅಂಗಡಿಯ ಮರದ ಟೆಬಲ್ ಕೆಳಗೆ ಕೂತಿರುವ ಕಿಡಿಗೇಡಿಗಳು ಶನಿವಾರ ತಡ ರಾತ್ರಿ ಚಳಿಕಾಯಿಸಲು ಬೆಂಕಿಹಾಕಿದ್ದು ನಂತರ ಅದನ್ನು ನಿರ್ಲಕ್ಷಿಸಿ ಹೋಗಿದ್ದಾರೆ ಉರಿಯುತ್ತಿದ್ದ ಬೆಂಕಿ ರಜನಿ ಮೊಬೈಲ್ ಅಂಗಡಿಯ ಪ್ಲಾಸ್ಟಿಕ್ ಸೈನ್ ಬೋರ್ಡ್ ಗೆ ತಾಕಿ ಅಂಗಡಿ ಮುಂದಿನ ಎಲ್ಲಾ ಪ್ಲಾಸಟಿಕ್ ಬೋರ್ಡ್ ಗಳು ಸುಟ್ಟಿದೆ ಅಲ್ಲೆ ಹಾದು ಹೋಗಿರುವ ಬೆಸ್ಕಾಂ ಮೈನ್ ವಿದ್ಯತ್ ತಂತಿಗೂ ಹೊತ್ತಿಕೊಂಡು ಸುಟ್ಟಿದೆ ಎಂದು ಹೇಳಲಾಗಿದ್ದು ತಡ ರಾತ್ರಿಯಲ್ಲಿ ಬೆಂಕಿ ದೃಶ್ಯ ಕಂಡವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಪರಿಣಾಮ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿರುತ್ತಾರೆ ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿರುತ್ತದೆ ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Breaking News
- SRINIVASAPURA ಹೂವಳ್ಳಿಕೃಷ್ಣಪ್ಪ ಕುಟುಂಬದಿಂದ ಗಣೇಶಮೂರ್ತಿ ವಿತರಣೆ.
- ಚಿಂತಾಮಣಿಯಲ್ಲಿ ಹೋಟೆಲ್ ಗೆ ನುಗ್ಗಿದ ಟಿಪ್ಪರ್ ಲಾರಿ ಇಬ್ಬರು ಸಾವು
- RAILWAY ರೈಲ್ವೆ ನಿಲ್ದಾಣದ ಕೂಲಿ IAS ಅಧಿಕಾರಿಯಾದ ಕಥೆ.
- SRINIVASAPURA ಪೋಲಿಸರೆಂದು ವೃದ್ಧೆ ಮಾಂಗಲ್ಯ ಎಗರಿಸಿರುವ ದುಷ್ಕರ್ಮಿಗಳು
- ಶ್ರೀನಿವಾಸಪುರದಲ್ಲಿ ಗುಜರಿ ಅಂಗಡಿಗೆ ಬೆಂಕಿ ಸುಟ್ಟು ಕರಕಲಾದ ಪ್ಲಾಸ್ಟಿಕ್
- ಕ್ರಿಕೆಟ್ ಚಂಡು ತಂದ ತಂಟೆ ಹೊತ್ತಿ ಉರಿದ ಆಂಧ್ರ V.KOTE
- ಪರಿಸರ ಪ್ರೇಮಿ ಶ್ರಮದಿಂದ ನೆಟ್ಟ ಗಿಡಗಳಿಗೆ ನರೇಗಾದಲ್ಲಿ (MGNREGA) ಅಕ್ರಮ ಬಿಲ್.
- ಚಿಂತಾಮಣಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
- ತಿರುಪತಿ ಲಡ್ಡು ತಯಾರಿಕೆಗೆ ಟ್ಯಾಂಕರನಲ್ಲಿ ಹೋದ ಕರ್ನಾಟಕದ ನಂದಿನಿ ತುಪ್ಪ
- ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರಕ್ಕೆ ಸಹಕರಿಸಿ ಪುರಸಭೆ ಅಧ್ಯಕ್ಷ ಭಾಸ್ಕರ್
Sunday, September 8