ಶ್ರೀನಿವಾಸಪುರ: ಶತಮಾನೋತ್ಸವ ಅಚರಿಸುತ್ತಿರುವ ಶ್ರೀನಿವಾಸಪುರದ ಶ್ರೀ ಶೃಂಗೇರಿ ಶಂಕರ ಮಠದ ಶತಮಾನೋತ್ಸವ ಹಾಗು ವಿಮಾನ ಗೋಪುರ ಕುಂಭಾಭಿಷೇಕ ಮಹೋತ್ಸವನ್ನು ಶ್ರೀ ಶೃಂಗೇರಿ ಶಂಕರ ಮಠದ ಉತ್ತಾಧಿಕಾರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ನೆವೇರಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವಂತ ಕಾರ್ಯಕ್ರಮದಲ್ಲಿ ಭಾಗವಹಿಸಲು ಲೋಕಕಲ್ಯಾಣಾರ್ಥ ವಿಜಯಿ ಯಾತ್ರೆಯಲ್ಲಿರುವ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸೋಮವಾರ ಸಂಜೆ 5 ಗಂಟೆಗೆ ಶ್ರೀನಿವಾಸಪುರ ಪುರ ಪ್ರವೇಶ ಮಾಡಲಿದ್ದಾರೆ ಅವರನ್ನು ವೇದಘೋಷ ಮಂಗಳ ವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ಮಾಡಲಿರುವುದಾಗಿ ವಿಪ್ರ ಸಂಘದ ದಿವಾಕರ್ ಮತ್ತು ಶಂಕರಮಠದ ಮೇನೆಜರ್ ಶ್ರೀನಿವಾಸನ್ ತಿಳಿಸಿರುತ್ತಾರೆ.
ಸೋಮವಾರ ಸಂಜೆ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳಿಗೆ ಶಂಕರ ಮಠದಲ್ಲಿ ಪಾದುಕ ಪೂಜೆ ಫಲ ಸಮರ್ಪಣೆ ಅದ ನಂತರ ಗುರುಗಳಿಂದ ಅನುಗ್ರಹ ಭಾಷಣ ಮತ್ತು ಶ್ರೀ ಚಂದ್ರಮೌಳೇಶ್ವರ ಪೂಜಾ ಅನುಷ್ಠಾನ ಇರುತ್ತದೆ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳ ನಡೆಯಲಿದ್ದು ಬುಧವಾರ ಶ್ರೀ ಗಳಿಂದ ಗುರು ದತ್ತಾತ್ರೇಯ ಆದಿ ಶಂಕರಾಚಾರ್ಯ,ಗಾಯಿತ್ರಿ ಮಹಾ ಪೂಜೆ ಹಾಗು ನವ ಚಂಡಿ ಮತ್ತು ರುದ್ರ ಹೋಮ ಪೂರ್ಣಾಹುತಿ ಆದ ನಂತರ ಶ್ರೀ ಶಂಕರ ಮಠದ ವಿಮಾನಗೋಪುರದ ಕುಂಭಾಭಿಷೇಕ ಸಾರ್ವಜನಿಕರಿಗೆ ಶ್ರೀ ಗಳ ದರ್ಶನ ಮತ್ತು ಫಲಮಂತ್ರಾಕ್ಷತೆ ಕಾರ್ಯ ನಡೆಯಲಿದೆ ಎಂದು ತಿಳಿಸಿರುತ್ತಾರೆ.
Breaking News
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
Wednesday, April 16