ಚಿಂತಾಮಣಿ:ಶ್ರೀನಿವಾಸಪುರದ ಕಟ್ಟೆಮನೆ ಶೆಟ್ಟಿಯಜಮಾನ್ರ ಕುಟುಂಬಕ್ಕೆ ತನ್ನದೆ ಅದ ಇತಿಹಾಸ ಇದೆ ಪ್ರಭಲವಾಗಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುತ್ತ ತಮ್ಮದೆ ಆದ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಶೆಟ್ಟಿಯಜಮಾನ್ರ ಕುಟುಂಬ ಶ್ರೀನಿವಾಸಪುರ ಪಟ್ಟಣದ ಆರಂಭಂದಿದಲೂ ಇಲ್ಲಿನ ವಾಸಿಗಳಾಗಿದ್ದು ಈಗ ಬದುಕು ಆರಿಸಿ ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ.
ಆ ಕುಟುಂಬದ ಎಲ್ಲಾ ಸದಸ್ಯರು ಒಂದಡೆ ಕೂಡಿದ್ದು, ಚಿಂತಾಮಣಿಯ ಅಲಂಬಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ಕಲ್ಕಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಇಲ್ಲಿ ಕಟ್ಟೆಮನೆ ಶೆಟ್ಟಿಯಜಮಾನ್ರ ಕುಟುಂಬದವರಿಂದ ಶ್ರೀ ಶ್ರೀನಿವಾಸಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.ಕಲ್ಯಾಣೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ವೇದಪಂಡಿತ ಶ್ರೀನಿವಾಸಚಾರ್ಯರು ಕಲ್ಯಾಣೋತ್ಸವದ ಪರಿಕಲ್ಪನೆ ಕುರಿತಂತೆ ವಿವರಿಸಿ ಸಪ್ತಪದಿ ಹಾಗು ವಿವಾಹದ ಮಹತ್ವ ಕುರಿತಾಗಿ ವಿವರಿಸಿದರು.ಶೆಟ್ಟಿಯಜಮಾನ್ರ ಕುಟುಂಬದವರು ಹಾಗು ವಿವಿಧಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಕಲ್ಯಾಣೋತ್ಸವವನ್ನು ಕಣ್ತುಂಬ ನೋಡಿ ಪುನೀತರಾದರು. ಈ ಸಂದರ್ಭದಲ್ಲಿ ಶೆಟ್ಟಿಯಜಮಾನ್ರ ಕುಟುಂಬದ ಹಿರಿಯ ಸದಸ್ಯರಾದ ಕಲ್ಯಾಣೋತ್ಸವದ ಪ್ರಮುಖ ರೂವಾರಿ ನಿವೃತ್ತ ಬ್ಯಾಂಕ್ ಅಧಿಕಾರಿ ರಘುಪ್ರಕಾಶ್,ಹಿರಿಯ ಸದಸ್ಯ ಕೇಂದ್ರ ಸರ್ಕಾರದ ಅಂಕಿಅಂಶಗಳ ನಿವೃತ್ತ ಅಧಿಕಾರಿ ತಿಪ್ಪಶೆಟ್ಟಿ,ಸ್ವಾತಂತ್ಯ ಹೋರಾಟಗಾರ ಚಂದ್ರಯ್ಯಶೆಟ್ಟಿ ಪತ್ನಿ ವನಜಾಕ್ಷಮ್ಮ,ನಿವೃತ್ತ ತಹಶೀಲ್ದಾರ್ ರಾಮನಾಥ್,ಕ್ರೀಡಾಪಟು ಹಾಗು ನಿವೃತ್ತ ಪೋಲಿಸ್ ಇನ್ಸಪೇಕ್ಟರ್ ವೆಂಕಟೇಶ್,ನಿವೃತ್ತ ಬ್ಯಾಂಕ್ ಅಧಿಕಾರಿ ಅಮರನಾಥ್,ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧಿಕಾರಿ ರವೀಂದ್ರ,ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ ಅಧಿಕಾರಿ ಕೃಷ್ಣವೇಣಿ,ಸ್ಯಾನ್ ಫ್ರಾನ್ಸಿಸ್ಕೊ ನಿವಾಸಿ ವಿನುತರಮೇಶ್,ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ವೆಂಕಟಾಚಲ,ಖ್ಯಾತ ಛಾಯಗ್ರಾಹಕ ವಾಸು ನೂರಾರು ಸಂಖ್ಯೆಯಲ್ಲಿ ಕುಟುಂಬದ ಸದಸ್ಯರು ಮುಂತಾದವರು ಇದ್ದರು.
Breaking News
- SRINIVASAPURA ಹೂವಳ್ಳಿಕೃಷ್ಣಪ್ಪ ಕುಟುಂಬದಿಂದ ಗಣೇಶಮೂರ್ತಿ ವಿತರಣೆ.
- ಚಿಂತಾಮಣಿಯಲ್ಲಿ ಹೋಟೆಲ್ ಗೆ ನುಗ್ಗಿದ ಟಿಪ್ಪರ್ ಲಾರಿ ಇಬ್ಬರು ಸಾವು
- RAILWAY ರೈಲ್ವೆ ನಿಲ್ದಾಣದ ಕೂಲಿ IAS ಅಧಿಕಾರಿಯಾದ ಕಥೆ.
- SRINIVASAPURA ಪೋಲಿಸರೆಂದು ವೃದ್ಧೆ ಮಾಂಗಲ್ಯ ಎಗರಿಸಿರುವ ದುಷ್ಕರ್ಮಿಗಳು
- ಶ್ರೀನಿವಾಸಪುರದಲ್ಲಿ ಗುಜರಿ ಅಂಗಡಿಗೆ ಬೆಂಕಿ ಸುಟ್ಟು ಕರಕಲಾದ ಪ್ಲಾಸ್ಟಿಕ್
- ಕ್ರಿಕೆಟ್ ಚಂಡು ತಂದ ತಂಟೆ ಹೊತ್ತಿ ಉರಿದ ಆಂಧ್ರ V.KOTE
- ಪರಿಸರ ಪ್ರೇಮಿ ಶ್ರಮದಿಂದ ನೆಟ್ಟ ಗಿಡಗಳಿಗೆ ನರೇಗಾದಲ್ಲಿ (MGNREGA) ಅಕ್ರಮ ಬಿಲ್.
- ಚಿಂತಾಮಣಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
- ತಿರುಪತಿ ಲಡ್ಡು ತಯಾರಿಕೆಗೆ ಟ್ಯಾಂಕರನಲ್ಲಿ ಹೋದ ಕರ್ನಾಟಕದ ನಂದಿನಿ ತುಪ್ಪ
- ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರಕ್ಕೆ ಸಹಕರಿಸಿ ಪುರಸಭೆ ಅಧ್ಯಕ್ಷ ಭಾಸ್ಕರ್
Sunday, September 8