ನ್ಯೂಜ್ ಡೆಸ್ಕ್:ಪ್ರಪಂಚದಾದ್ಯಂತ ಯುವ ಸಮುದಾಯ Feb14 ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದರೆ ಇಲ್ಲೊಬ್ಬ ವಿಕೃತ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಮೇಲೆ ಆಸಿಡ್ ಸುರಿದು ಕ್ರೌರ್ಯ ಮೇರದಿದ್ದಾನೆ.
ಘಟನೆ ನಡೆದಿರುವುದು ಆಂಧ್ರಪ್ರದೇಶದ ಮದನಪಲ್ಲೆ ಸಮೀಪದ ಗುರ್ರಮಕೊಂಡ ಮಂಡಲದ ಪ್ಯಾರಂಪಳ್ಳಿ, ಗ್ರಾಮದ ಜನಾರ್ದನ್ ಮತ್ತು ರೆಡ್ಡೆಮ್ಮ ದಂಪತಿ ಪುತ್ರಿ ಗೌತಮಿ, ಮದನಪಲ್ಲಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪದವಿ ಮುಗಿಸಿ, ಮದನಪಲ್ಲಿ ನಗರದ ಕದಿರಿ ರಸ್ತೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತುತ್ತಿದ್ದಾಳೆ.
ಆಸಿಡ್ ದಾಳಿ ನಡೆಸಿದ ಆರೋಪಿಯನ್ನು ಮದನಪಲ್ಲಿಯ ಅಮ್ಮಚೆರುವು ಮಿಟ್ಟೆಯ ಗಣೇಶ್ ಎಂದು ಗುರತಿಸಲಾಗಿದೆ.
ಇಂದು ಮುಂಜಾನೆ ಗೌತಮಿಯ ಪೋಷಕರು ಹಾಲು ಕರೆಯಲು ಹಸುಮೆನೆಗ್ ಹೋಗಿದ್ದಾರೆ ಈ ಸಂದರ್ಭದಲ್ಲಿ ಗೌತಮಿ ಮನೆಗೆ ಒಬ್ಬಳೆ ಇರುವುದನ್ನು ಬಳಸಿಕೊಂಡು ಮನೆಗೆ ಹೋಗಿ ಮಲಗಿದ್ದ ಗೌತಮಿಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ನಂತರ ಆಕೆಯ ಮುಖದ ಮೇಲೆ ಆಸಿಡ್ ಸುರಿದಿದ್ದಾನೆ.ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ, ಆಕೆಯ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮದುವೆ ನಿಶ್ಚಯದಿಂದ ಹಲ್ಲೆ
ಯುವಕ ಗಣೇಶ್ ಪ್ರೀತಿಸುವಂತೆ ಗೌತಮಿಯ ಹಿಂದೆ ಬಿದ್ದು ಪಿಡಿಸುತ್ತಿದ್ದ ಈ ಮದ್ಯೆ ಗೌತಮಿಯ ಪೋಷಕರು ಪಿಲೇರಿನ ಶ್ರೀಕಾಂತ್ ಜೋತೆ ಗೌತಮಿಗೆ ಮದುವೆ ನಿಶ್ಚಯಮಾಡಿದ್ದು ಮುಂದಿನ ಏಪ್ರಿಲ್ 29 ರಂದು ಮದುವೆ ದಿನಾಂಕ ನಿಗದಿಪಡಿಸಿದ್ದಾರೆ ಇದನ್ನು ತಿಳಿದುಕೊಂಡ ಗಣೇಶ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ/ಇದನ್ನು ಓದಿ:ಕಿಚಕ ಶಿಕ್ಷಕರಿಂದ ವಿದ್ಯಾರ್ಥಿನಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ
Breaking News
- ಛತ್ರಪತಿ ಶಿವಾಜಿ ಮಹಾರಾಜ್ ಮಗ ಶಂಭಾಜಿಯ ಶೌರ್ಯದ chaava ಸಿನಿಮಾ
- ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು!
- ತಿರುಮಲ ಕಾಲು ಮಾರ್ಗದಲ್ಲಿ ಅಕ್ಕನವರುಗಳ ದೇವಾಲಯ
- ಕುರುಡುಮಲೆ ಗಣೇಶ ದೇಗುಲದಲ್ಲಿ ಸಂಕಷ್ಟ ಚತುರ್ಥಿ ವಿಶೇಷ ಪೂಜೆ
- ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿ ವಾಹನ ಬಡಿದು ಜಿಂಕೆ ಸಾವು
- ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಮಕ್ಕಳಿಗೆ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ!
- Tragedy:ಪ್ರೇಮಿಗಳ ದಿನದಂದೆ ಯುವತಿ ಮೇಲೆ ಆಸಿಡ್ ದಾಳಿ!
- ಸೇಡು ತಿರಿಸಿಕೊಳ್ಳಲು ಮದ್ಯಸೇವಿಸಿ ಬಸ್ ಅಪಹರಿಸಿದ ಭೂಪ!
- Srinivaspur:ಫಾರ್ಮಾಸುಟಿಕಲ್ಸ್ ಪಾರ್ಕ್ ಸಚಿವ ಎಂ.ಬಿ.ಪಾಟಿಲ್!
- visa ಬಾಲಾಜಿ ದೇವಾಲಯದ ಅರ್ಚಕ ಹಾಗು ಕುಟುಂಬದ ಮೇಲೆ ದಾಳಿ!
Thursday, February 20