Author: admin

ಕೋಲಾರ: ಅಯೋಧ್ಯೆಯಲ್ಲಿ ಜ.22ರಂದು ಭಗವಾನ್​ ಶ್ರೀರಾಮಚಂದ್ರ ಮೂರ್ತಿ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು ಇಲ್ಲಿನ ಪೂಜಾ ಹವನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಯ ಇಬ್ಬರು ಅಯೋಧ್ಯೆಗೆ ತೆರಳಿಲಿದ್ದಾರೆಕೋಲಾರದ ರಮೇಶ್​ ಭಟ್​ ವೈದಿಕ ಪರಿಚಾರಕರಾಗಿ ತೆರಳಿದ್ದು, ತಾಲೂಕಿನ ನಾಗಲಪುರ ಸಂಸ್ಥಾನ ಮಠಧ್ಯಕ್ಷರಾದ ತೇಜೇಶಲಿಂಗ ಸ್ವಾಮೀಜಿ ಪ್ರಯಾಣ ಬೆಳೆಸಿದ್ದಾರೆ.ರಮೇಶ್​ ಭಟ್​ ಅವರು ಸುಮಾರು ಕಳೆದ ಎರಡು ದಶಕಗಳಿಂದ ಕೋಲಾರದಲ್ಲಿ ವೈಧಿಕರಾಗಿ ತೊಡಗಿಸಿಕೊಂಡಿದ್ದ ಅವರು 2019ರಿಂದ ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಟಾಕ್​ಟನ್​ನ ಶಿವ ವಿಷ್ಣು ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋಲಾರದಲ್ಲಿ ಪ್ರತಿವರ್ಷ ತಿರುಪ್ಪಾವಡೈ ಉತ್ಸವ ನಡೆಸುತ್ತಿದ್ದ ರಮೇಶ್​ಭಟ್​ ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರವಚನ ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ.ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ ಮಠಾಧೀಶರಾಗಿ ಧಾರ್ಮಿಕ ಗುರುವಾಗಿ ಆಧ್ಯಾತ್ಮಿಕತೆಯನ್ನು ಜನರಿಗೆ ಬೋಧಿಸುತ್ತ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ದಶಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿರುವುದಕ್ಕೆ ಇಡೀ ಜಿಲ್ಲೆಗೆ ಬಂದ ಆಹ್ವಾನ ಎಂದು ಭಾವಿಸಿದ್ದೇನೆ. ಸಂತಸ ಸಂಭ್ರಮ ತಂದಿದೆಭಗವಂತನ ಹಾಗೂ ಹಿರಿಯರ ಆಶೀರ್ವಾದದಿಂದ ಶ್ರೀರಾಮನ…

Read More

ಶ್ರೀನಿವಾಸಪುರ: ತಾಲೂಕಿನ ಜೀವನಾಡಿ ಬೆಳೆಯಾಗಿರುವ ಮಾವು ಕಳೆದ ಎರಡು ಮೂರು ವರ್ಷಗಳಿಂದ ಹವಾಮಾನ ವೈಪರಿತ್ಯದಿಂದ ಬೆಳೆಗಾರನಿಗೆ ನಷ್ಟ ಉಂಟಾಗುತ್ತಿದೆ ಈ ವಿಚಾರ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳಿಗೂ ತಿಳಿದ ವಿಚಾರವಾಗಿದೆ ಆದರೂ ಮಾವು ಬೆಳೆಗಾರರಿಂದ ವಿಮೆ ಕಟ್ಟಿಸಿಕೊಂಡಿರುವ ಸಂಸ್ಥೆ ಹವಾಮಾನ ವೈಪರಿತ್ಯದಿಂದ ಯಾವುದೆ ಬೆಳೆಹಾನಿಯಾಗಿಲ್ಲ ನಮ್ಮಲ್ಲಿ ಉಪಗ್ರಹ ಅಧಾರಿತ ವರದಿ ಇದೆ ಎಂದು ವಿಮಾ ದಾರರಿಗೆ ನಷ್ಟದ ವಿಮೆ ಹಣ ನೀಡದೆ ವಿಮೆ ಸಂಸ್ಥೆ ಮೋಸ ಮಾಡುತ್ತಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಆರೋಪಿಸಿದರು.ಇಂದು ವಿವಿಧ ರೈತ ಸಂಘಗಳಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೇಂದ್ರ ಸರ್ಕಾರವೆ ಮಾವು ಬೆಳೆಗೆ ವಿಮೆ ಕಟ್ಟುವಂತೆ ಪ್ರಚಾರಮಾಡಿತ್ತು ಅದರಂತೆ ಮಾವು ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿ ಮಾವುಬೆಳೆಗೆ 2021-2022 ಸಾಲಿನ ವಿಮೆ ಕಂತು ಕಟ್ಟಿದ್ದರು ಆದರೆ 2021 ಸಾಲಿನಲ್ಲಿ ಹವಾಮಾನ ವೈಪರಿತ್ಯದಿಂದ ಹೆಚ್ಚಿನ ಮಳೆಯಾಗಿ ಮಾವು ಇಳುವರಿ ಬಾರದೆ ಬಂದಂತ ಇಳುವರಿ ಹೆಚ್ಚು ದಿನ ನಿಲ್ಲದೆ ಮಾವು ಬೆಳೆಗಾರರು ಸಾಕಷ್ಟು…

Read More

ಶ್ರೀನಿವಾಸಪುರ: ಎಸ್.ಟಿ ಸಮುದಾಯಕ್ಕೆ ಯಾವುದೇ ಪಕ್ಷಗಳವರು ನ್ಯಾಯ ಒದಗಿಸಿಲ್ಲ ಕೇವಲ ಬಿಜೆಪಿಯಿಂದ ಮಾತ್ರ ಎಸ್.ಟಿ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ ಎಸ್.ಟಿ ಸಮುದಾಯದಕ್ಕೆ ದ್ರೌಪದಿ ಮುರ್ಮ ಅವರು ರಾಷ್ಟ್ರಪತಿ ಸ್ಥಾನ ಅಲಂಕರಿಸಲು ಬಿಜೆಪಿ ನ್ಯಾಯೋಜಿತ ನಿರ್ಣಯ ಕಾರಣವಾಗಿದೆ ಈ ಮೂಲಕ ನಿಜವಾದ ಸಾಮಾಜಿಕ ಅನುಷ್ಟಾನ ಗೊಳಿಸುತ್ತಿರುವುದು ಭಾರತೀಯ ಜನತಾ ಪಕ್ಷದ ಸರ್ಕಾರ ಎಂದು ಸಂಸದ ಮುನಿಸ್ವಾಮಿ ಹೇಳಿದರು ಈ ತಿಂಗಳ 20 ರಂದು ಬಳ್ಳಾರಿಯಲ್ಲಿ ನಡೆಯುವ ಎಸ್.ಟಿ ಸಮಾವೇಶದ ಸಂಭಂದ ಪಟ್ಟಣದ ಮಾರುತಿ ಸಭಾಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ ಪಕ್ಷ ಅಂಬೇಡ್ಕರ್ ಅವರಿಗೆ ಮೋಸ ಮಾಡಿದೆ ಅಂತಹ ಪಕ್ಷದಿಂದ ಎಸ್ಸಿ ಎಸ್ಟಿ ಸಮುದಾಯಗಳಿಗೆ ಯಾವ ನ್ಯಾಯ ನೀರಿಕ್ಷೀಸಬಹುದು ಎಂದರು.ಭಾರತೀಯ ಜನತಾ ಪಕ್ಷ ಎಲ್ಲಾ ಸಮುದಾಗಳ ಅಭಿವೃದ್ದಿಗೆ ಶ್ರಮಿಸುತ್ತಿದೆ ಕಾಂಗ್ರೆಸ್ ನೈಪತ್ಯಕ್ಕೆ ಸರಿಯುತ್ತಿದೆ ಜೋಡೋ ಯಾತ್ರೆ ಮೂಲಕ ಹೊಸ ಅವತಾರದಲ್ಲಿ ಜನತೆ ಮುಂದೆ ಬಂದಿರುವ ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ಒಡೆದು ಪಾಕಿಸ್ಥಾನ ಬಾಂಗ್ಲಾ ಸೇರಿದಂತೆ ಚಿನಾಗೂ…

Read More

ಶ್ರೀನಿವಾಸಪುರ: ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ಜನಪರ ಕಾಳಜಿ ಹಾಗೂ ದೂರ ದೃಷ್ಟಿ ಅಭಿವೃದ್ಧಿಯಿಂದಾಗಿ ಬೆಂಗಳೂರು ಮಹಾನಗರ ಬೃಹದಕಾರವಾಗಿ ಅಭಿವೃದ್ಧಿಯಾಗಿದೆ ಇದರ ಫಲ ಇಂದು ನಾಡಿನ ಜನತೆ ಕೆಂಪೇಗೌಡರನ್ನು ಕೊಂಡಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.ತಾಲ್ಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬೆಂಗಳೂರು ವಿಮಾನ ನಿಲ್ದಾಣದ ಬಳಿ ಮೋದಿ ಅವರಿಂದ ನ.11ರಂದು ಕೆಂಪೇಗೌಡರ ಪುತ್ಥಳಿ ಅನಾವರಣಗೊಳ್ಳಲಿದ್ದು ಇದರ ಅನ್ವಯ ರಾಜ್ಯಾದ್ಯಂತ ಪ್ರತಿ ಗ್ರಾಮದಲ್ಲೂ ಮೃತಿಕೆ ಸಂಗ್ರಹ ಮಾಡಲಾಗುತ್ತಿದ್ದು ಅದಕ್ಕಾಗಿ ನಾಡಪ್ರಭು ಕೆಂಪೇಗೌಡರ ರಥಯಾತ್ರೆ ತೆರಳುತ್ತಿದೆ ತಾಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮಕ್ಕೆ ರಥಯಾತ್ರೆ ಆಗಮಿಸಿದಾಗ ತಾಲೂಕಿನ ರಾಜ್ಯ ಮಾವು ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಹಾಗು ಪ್ರಭಾವಿ ಕಾಂಗ್ರೆಸ್ ಮುಖಂಡ ದಳಸನೂರು ಗೋಪಾಲಕೃಷ್ಣ ಹಾಗು ಅವರ ಅಭಿಮಾನಿಗಳು ಮುಂದೆ ನಿಂತು ಕೆಂಪೇಗೌಡರ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದರುಈ ಸಂದರ್ಭದಲ್ಲಿ ದಳಸನೂರು ಗೋಪಾಲಕೃಷ್ಣ ಮಾತನಾಡಿ ಕೆಂಪೇಗೌಡರ ಜಾತ್ಯತೀತ ನಿಲವು ಎಲ್ಲಾ ಜಾತಿ ಧರ್ಮಗಳ ಗೌರವಿಸುವ ನಿಲವುಗಳು ಮೆಚ್ಚುವಂತದ್ದು…

Read More

ನ್ಯೂಜ್ ಡೆಸ್ಕ್: ತಿರುಮಲದಲ್ಲಿ ದೇವರ ದರ್ಶನಕ್ಕೆ ಅನಕೂಲ ಆಗುವಂತೆ ಮಂಗಳವಾರದಿಂದ ಟಿಟಿಡಿ ಸ್ಲಾಟೆಡ್ ಸರ್ವ ದರ್ಶನ ಟೋಕನ್ ವ್ಯವಸ್ಥೆಯನ್ನು ಪುನಃ ಪರಿಚಯಿಸಲಾಗುತ್ತಿದೆ. ತಿರುಮಲಲ್ಲಿ ವೆಂಕಟೇಶ್ವರ ಸ್ವಾಮಿ ಸರ್ವದರ್ಶನ ಟೈಮ್‌ಸ್ಲಾಟ್ ಟೋಕನ್‌ ಗಳನ್ನು ವಿತರಿಸಲಾಗುವುದು. ತಿರುಪತಿಯ ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸಂ ಕಾಂಪ್ಲೆಕ್ಸ್ ಮತ್ತು ಗೋವಿಂದರಾಜಸ್ವಾಮಿ ಚತ್ರಗಳಲ್ಲಿ ಸ್ಥಾಪಿಸಲಾಗಿರುವ ಕೌಂಟರ್‌ಗಳ ಮೂಲಕ ಟೋಕನ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಶನಿವಾರ, ಭಾನುವಾರ ಮತ್ತು ಸೋಮವಾರದಂದು ದಿನಕ್ಕೆ 25 ಸಾವಿರ ಟೋಕನ್ ಮತ್ತು ಇತರೆ ದಿನಗಳಲ್ಲಿ ದಿನಕ್ಕೆ 15 ಸಾವಿರ ಟೋಕನ್ ನೀಡಲಾಗುವುದು ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ. ಟೋಕನ್ ಪಡೆದ ಭಕ್ತರು ಅದೇ ದಿನ ದರ್ಶನ ಪಡೆಯುವಂತ ವ್ಯವಸ್ಥೆ ಮಾಡಲಾಗಿದೆ ಎಂದಿರುತ್ತಾರೆ. ಮೂರು ಪ್ರದೇಶಗಳಲ್ಲಿ 30 ಕೌಂಟರ್‌ಗಳ ಮೂಲಕ ಟೋಕನ್‌ಗಳನ್ನು ನೀಡಲಾಗುವುದು ಮತ್ತು ನಿಗದಿತ ಕೋಟಾ ಪೂರ್ಣಗೊಂಡ ನಂತರ ಕೌಂಟರ್‌ಗಳನ್ನು ಮುಚ್ಚಲಾಗುತ್ತದೆ. ಟೋಕನ್ ಇಲ್ಲದ ಭಕ್ತರು ನೇರವಾಗಿ ತಿರುಮಲ ತಲುಪಿದರೆ ಅಲ್ಲಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2 ಮೂಲಕ ಶ್ರೀವಾರಿ ದರ್ಶನಕ್ಕೆ ಅಗತ್ಯ ವ್ಯವಸ್ಥೆ…

Read More

ನ್ಯೂಜ್ ಡೆಸ್ಕ್: ತಿರುಮಲ ಶ್ರೀವಾರಿ ದರ್ಶನದ ಟಿಕೆಟ್ ಗಳನ್ನು ಚಿಂತಾಮಣಿಯ ಭಕ್ತರಿಗೆ ಸಾವಿರಾರು ರೂಪಾಯಿಗಳಿಗೆ ಮಾರಟಮಾಡಿದ್ದ ಆಂಧ್ರದ ದಲ್ಲಾಳಿಯೊಬ್ಬ ತಿರುಮಲ ಪೋಲಿಸರಿಗೆ ಸಿಕ್ಕಿಬಿದ್ದಿರುತ್ತಾನೆ. ಈ ಸಂಬಂದ ತಿರುಮಲ ಟೂಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಿಶೇಷ ದರ್ಶನದ 3600 ಬೆಲೆಯ 12 ಟಿಕೆಟ್ ಗಳನ್ನು ಚಿಂತಾಮಣಿ ಮೂಲದ ಬೆಂಗಳೂರಿನಲ್ಲಿ ವಾಸ ಇರುವಂತ ಭಕ್ತರಿಗೆ ರೂ.38 ಸಾವಿರಕ್ಕೆ ಮಾರಾಟ ಮಾಡಿದ್ದು ಟಿಕೆಟ್‌ಗಳು ಸಮಯಕ್ಕೆ ಸ್ಕಾನ್ ಆಗದ ಹಿನ್ನಲೆಯಲ್ಲಿ ಭಕ್ತರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೋಲಿಸರು ಈ ಬಗ್ಗೆ ವಿಚಾರಿಸಲಾಗಿ ಟಿಕೆಟ್‌ ಮಾರಿದ್ದ ದಲ್ಲಾಳಿ, ಚಿಂತಾಮಣಿ ಮೂಲದ ಭಕ್ತರು ಶ್ರೀವಾರಿ ದರ್ಶನಕ್ಕಾಗಿ ಟಿಕೆಟ್ ಗಳನ್ನು ಪಡೆಯಲು ಸ್ನೇಹಿತರೊಬ್ಬರ ಮೂಲಕ ದಲ್ಲಾಳಿಯನ್ನು ಸಂಪರ್ಕಿಸಿದ್ದಾರೆ ಆತನಿಗೆ ಆನ್ ಲೈನ್ ಮೂಲಕ 38 ಸಾವಿರ ಹಣವನ್ನು ವರ್ಗಾಯಿಸಿರುತ್ತರೆ ನಂತರ ಅವನು ಆನ್ ಲೈನ್ ವಿಶೇಷ ದರ್ಶನದ ಸುಪಥಂ ಟಿಕೆಟ್ ಗಳನ್ನು ವ್ಯಾಟ್ಸಾಪ್ ಮೂಲಕ ಕಳಿಸಿದ್ದಾನೆ ಅದರಂತೆ ಭಕ್ತರು ತಿರುಮಲಕ್ಕೆ ಹೋಗಿ ಟಿಕೆಟ್ ನೀಡಿದ್ದು ವೈಕುಂಠಂ 1 ಕ್ಯೂ ಕಾಂಪ್ಲೆಕ್ಸ್ ನಲ್ಲಿ ಟಿಕೆಟ್…

Read More

ಶ್ರೀನಿವಾಸಪುರ:ಡಾ.ಪುನೀತ್ ರಾಜಕುಮಾರ್ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದಲ್ಲಿ ಅಭಿಮಾನಿಗಳು ಪುರಸಭೆ ಕಚೇರಿ ಮುಂಭಾಗದಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್.ಎಲ್.ಎನ್.ಮಂಜು ಮಾತನಾಡಿ ಪುನೀತ್ ಚಿತ್ರರಂಗದಲ್ಲಿ ನಾಯಕ ನಟನಾಗಿ ಬರುವುದಕ್ಕೆ ಮುಂಚಿನಿಂದಲೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಾಮಜಿಕ ಸೇವೆ ಮಾಡುತ್ತಿದ್ದರು ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕು ಎಂಬ ತುಡಿತ ಅವರಲ್ಲಿ ಇತ್ತು ಇಂದಿನ ಯುವ ಪೀಳಿಗೆಗೆ ಅವರ ಸಮಾಜ ಸೇವೆ ಪರಿಸರ ಪ್ರೇಮ ಆದರ್ಶವಾಗಬೇಕು ಎಂದರು.ಪುಷ್ಪ ನಮನ ಸಲ್ಲಿಸಿದರು. ಅಭಿಮಾನಿಗಳ ಆರಾದ್ಯ ದೈವ ಅಪ್ಪು ಮೇಲಿನ ಪ್ರೀತಿಗಾಗಿ ದೊಡ್ದ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಸಾರ್ವಜನಿಕ ಅನ್ನ ಸಂಪರ್ಪಣೆ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪುನಿತ್ ಅಭಿಮಾನಿ ಬಳಗದ ಮುಖಂಡ ರಾಜ್ ಸೌಂಡ್ ಸಿಸ್ಟಮ್ ಮಾಲಿಕ ಶ್ರೀನಿವಾಸ ನವೆಂಬರ್ 19 ರಂದು ಶ್ರೀನಿವಾಸಪುರ ಪಟ್ಟಣದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತಿದ್ದು ಕಾರ್ಯಕ್ರಮಕ್ಕೆ ಡಾ.ರಾಜ್ ಕುಟುಂಬದವರನ್ನು ಹಾಗು ಕನ್ನಡ ಚಲನಚಿತ್ರ ನಟರನ್ನು ಕರೆಸುವಂತ ಯೋಜನೆ ಇದೆ ಎಂದರು. ಈ…

Read More

ಶ್ರೀನಿವಾಸಪುರ: ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿ 108 ಅಡಿಗಳ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣ ಮಾಡಲಿದ್ದು ಈ ಸಂಬಂದ ವಕ್ಕಲಿಗ ಸಮಾಜದಲ್ಲಿ ಜಾಗೃತಿ ಮೂಡಿಸಿ ನಾಡಿನ ಪ್ರಖ್ಯಾತ ಸ್ಥಳಗಳಲ್ಲಿ ಮೃತಿಕೆ ಮಣ್ಣು ಸಂಗ್ರಹಣೆ ಕುರಿತಾಗಿ ರಾಜ್ಯಾದ್ಯಂತ ಕೇಂಪೇಗೌಡರ ರಥಯಾತ್ರೆ ಸಂಚರಿಸುತ್ತಿದ್ದು ಅದರಂತೆ ಇಂದು ತಾಲೂಕಿಗೆ ರಥಯಾತ್ರೆ ಪ್ರವೇಶ ಮಾಡಿದೆ ಈ ಸಂಬಂದ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ಶ್ರೀ ಬಾಲಂಜನೇಯ ದೇವಾಲಯದ ಆವರಣಕ್ಕೆ ರಥಯಾತ್ರೆಯ ವಾಹನ ಆಗಮಿಸುತ್ತಿದ್ದಂತೆ ವಕ್ಕಲಿಗ ಸಮುದಾಯದ ಸ್ವಾಮಿಜಿಗಳ ಫೋಟೋ ಬಳಸದೆ ಪ್ರಧಾನಿ, ಮುಖ್ಯಮಂತ್ರಿ ಇತರೆ ಮಂತ್ರಿಗಳ ಫೋಟೋಗಳನ್ನು ಇರಿಸಿ ರಥಯಾತ್ರೆ ಮಾಡುವ ಮೂಲಕ ಸರ್ಕಾರ ರಾಜಕೀಯ ಮಾಡಲು ಹೋರಟಿದೆ ಎಂದು ಸ್ಥಳೀಯ ವಕ್ಕಲಿಗ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ತಾಲೂಕು ವಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ನಿಲಟೂರ್ ಚಿನ್ನಪ್ಪರೆಡ್ಡಿ,ಆನಂದರೆಡ್ಡಿ,ಕೊಳತೂರುಪ್ರಶಾಂತ್,ಬೆಲ್ಲಂಶ್ರೀನಿವಾಸರೆಡ್ಡಿ,ಬಸ್ ಶ್ರೀನಿವಾಸರೆಡ್ಡಿ ಮುಂತಾದವರು ತೀವ್ರಧಾಟಿಯಲ್ಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.ವಕ್ಕಲಿಗ ಮುಖಂಡರ ವರ್ತನೆಯಿಂದ ಗಲಿಬಿಲಿಗೊಂಡ ಕಾರ್ಯಕ್ರಮದ ಆಯೋಜಕರು ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಜಿಲ್ಲಾ ಬಿಜೆಪಿ ಅಧ್ಯಕ್ಷ…

Read More

ಶ್ರೀನಿವಾಸಪುರ:ಕಾಂತರ ಸಿನಿಮಾ ನೋಡುತ್ತಿದ್ದ ಮಹಿಳೆಯೊಬ್ಬರು ಸಿನಿಮಾದ ಕ್ಲೈಮಾಕ್ಸ್ ಸಂದರ್ಭದಲ್ಲಿ ವಿಚಿತ್ರವಾಗಿ ವರ್ತಿಸಿದ ಘಟನೆ ತಾಲೂಕಿನ ಗೌವನಪಲ್ಲಿಯ ರಂಗಮಹಲ್ ಥೀಯೇಟರ್ ನಲ್ಲಿ ನಡೆದಿರುತ್ತದೆ. ತಾಲೂಕಿನ ಆಂಧ್ರದ ಗಡಿಭಾಗದಲ್ಲಿನ ಗೌವನಿಪಲ್ಲಿಯಲ್ಲಿರುವ ರಂಗಮಹಲ್ ಸಿನಿಮಾ ಮಂದಿರದಲ್ಲಿ ತೆಲಗು ಚಿತ್ರಗಳನ್ನು ರಾಜ್ಯಾದ್ಯಂತ ತೆರೆಕಂಡಂತ ದಿನವೆ ಬಿಡುಗಡೆ ಮಾಡುವುದು ಸಾಮನ್ಯ, ಇಂತಹ ಸಿನಿಮಾ ಮಂದಿರದಲ್ಲಿ ಅಪರೂಪ ಎನ್ನುವಂತೆ ಕನ್ನಡ BIG HIT ಕಾಂತಾರ ಕನ್ನಡ ಸಿನಿಮಾ ಬಿಡುಗಡೆ ಮಾಡಿದ್ದಾರೆ ಕಳೆದ ಎರಡು ವಾರಗಳಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದಿನಂತೆ ಬುಧವಾರ ಸಂಜೆ ಸಿನಿಮಾ ಪ್ರದರ್ಶನದ ನಡೆಯುತ್ತಿದೆ ಸಿನಿಮಾದ ಕ್ಲೈಮಾಕ್ಸ್ ನಲ್ಲಿ ನಟ ರಿಷಿಭ್ ಶೆಟ್ಟಿ ಮೇಲೆ ದೈವಾಗಮನದ ಸನ್ನಿವೇಶದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಲ್ಲಿ ಮಹಿಳಾ ಪ್ರೇಕ್ಷಕಿಯೊಬ್ಬರು ಏಕಾ ಏಕಿ ಆಸನದಲ್ಲಿಯೇ ಕುಳಿತು ಕೂಗಾಡುತ್ತ ವಿಚಿತ್ರವಾಗಿ ವರ್ತಿಸಿದ್ದಾಳೆ ಇದರಿಂದ ಅಕೆಯ ಅಕ್ಕ ಪಕ್ಕದಲ್ಲಿ ಕುಳತಿದ್ದ ವೀಕ್ಷಕರು ಗಲಿಬಿಲಿಗೊಂಡಾಗ ಕೆಲ ನಿಮಿಷಗಳ ಕಾಲ ಪ್ರದರ್ಶನ ರದ್ದು ಮಾಡಿ ಆಕೆಯನ್ನು ಹೊರಗೆ ಕಳಿಸಿ ನಂತರ ಸಿನಿಮಾ ಪ್ರದರ್ಶನ ಮುಂದುವರೆಸಿದ್ದಾರೆ.

Read More

ನ್ಯೂಜ್ ಡೆಸ್ಕ್: ಬೆಳಕಿನ ಹಬ್ಬ “ದೀಪಾವಳಿ” ಹೆಸರಿನಲ್ಲಿ ಆಂಧ್ರಪ್ರದೇಶದಲ್ಲಿ ಎರಡು ಗ್ರಾಮಗಳಿವೆ ಒಂದು ಗ್ರಾಮದಲ್ಲಿ ಸುಮಾರು 300 ಮನೆಗಳು ಒಂದು ಸಾವಿರ ಜನಸಂಖ್ಯೆ ಇದ್ದರೆ ಮತ್ತೊಂದು ಗ್ರಾಮದಲ್ಲಿ ಸುಮಾರು 50 ಕುಟುಂಬಗಳ ಸಣ್ಣ ಗ್ರಾಮವಾಗಿದೆ ಈ ಎರಡು ಗ್ರಾಮಗಳ ಹೆಸರು ದೀಪಾವಳಿಎಂಬುದೆ ವಿಶೇಷ.ಆಂಧ್ರದ ಶ್ರೀಕಾಕುಲಂ ಜಿಲ್ಲೆಯಲ್ಲಿಯೇ ಎರಡು ದೀಪಾವಳಿ ಗ್ರಾಮಗಳು ಇದೆ ತೆಕ್ಕಲಿ ಮಂಡಲ ವ್ಯಾಪ್ತಿಯ ಅಯೋಧ್ಯಾಪುರ ಪಂಚಾಯಿತಿಯಲ್ಲಿ “ದೀಪಾವಳಿಪೇಟ” ಎಂಬ 50 ಕುಟುಂಬಗಳ ಸಣ್ಣ ಗ್ರಾಮವಾಗಿದ್ದರೆ, ಗಾರ ಮಂಡಲ ವ್ಯಾಪ್ತಿಯಲ್ಲಿ ಸುಮಾರು 300 ಮನೆಗಳು ಮತ್ತು ಒಂದು ಸಾವಿರ ಜನಸಂಖ್ಯೆಯ ದೀಪಾವಳಿ ಎಂಬ ಗ್ರಾಮವಿದೆ.ದೀಪಾವಳಿ ಹೆಸರಿಗೆ ಕಥೆಯೊಂದು ಇದೆ.ಗ್ರಾಮಕ್ಕೆ ದೀಪಾವಳಿ ಹೆಸರನ್ನು ಇಡುವ ಬಗ್ಗೆ ಜನಪ್ರಿಯ ಕಥೆಯಿದೆ ದಶಕಗಳ ಹಿಂದೆ ಆ ಪ್ರದೇಶವನ್ನು ಆಳುತ್ತಿದ್ದ ರಾಜ ತನ್ನ ಪರಿವಾರದೊಂದಿಗೆ ಕುದುರೆಯ ಮೇಲೆ ಕಳಿಂಗಪಟ್ಟಣಕ್ಕೆ ಹೋಗುತ್ತಿದ್ದಾಗ ಸೂರ್ಯನ ತಾಪ ತಾಳಲಾರದೆ ಗ್ರಾಮದಲ್ಲಿ ಬಿದ್ದು ಮೂರ್ಛೆ ಹೋದನಂತೆ ಈ ಸಮಯದಲ್ಲಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದ ಕೂಲಿಕಾರರು ಹಾಗು ಜನತೆ ಬಂದು ರಾಜನನ್ನು ಭೇಟಿ…

Read More