Author: Srinivas_Murthy

ರಾಜ್ಯ ಸರ್ಕಾರದ ಯೋಜನೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು ಶ್ರೀನಿವಾಸಪುರ :ರಾಜ್ಯ ಸರ್ಕಾರ ಮಹಿಳೆಯರಿಗೆ ಜಾರಿಗೆ ತಂದಿರುವ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಉಚಿತ ಪ್ರಯಾಣದ ಪರಿಣಾಮ ಆಟೋ ಚಾಲಕರು ಬಾಡಿಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿ ನರಳುವಂತಾಗಿದೆ ಲಕ್ಷಾಂತರ ಆಟೋಚಾಲಕರ ಕುಟುಂಬಗಳು ಬಿದಿಗೆ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಆರೋಪಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ತಾಲೂಕು ಆಟೋ ಚಾಲಕರ ಸಂಘದವತಿಯಿಂದ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಸರ್ಕಾರಕ್ಕೆ ಬಡವರ ಹಾಗು ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡಿಸೇಲ್.ಎಲ್.ಪಿ.ಜಿ ಉತ್ಪನ್ನಗಳ ಬೆಲೆ ಏರಿಕೆ ಮಾಡಿರುವುದರಿಂದ ಆಟೋ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಅದರೊಂದಿಗೆ ಕಾರ್ಮಿಕರು ಸಾಮನ್ಯ ಜನತೆ ಉಪಯೋಗಿಸುವ ದಿನನಿತ್ಯ ಪಧಾರ್ಥಗಳಾದ ಹಾಲು, ತರಕಾರಿ ಗಗನಕ್ಕೆ ಏರಿಕೆಯಾಗಿರುವುದು ಕಾರ್ಮಿಕರ ಕುಟುಂಬದ ನಿತ್ಯ ಬದುಕಿನ ನಿರ್ವಹಣೆಗೆ ಕಷ್ಟಕರವಾಗಿದೆ ಎಂದ ಅವರು ಆಟೋ ಪ್ರಯಾಣದ ಧರವನ್ನು ಏರಿಸುವಂತೆ…

Read More

ನ್ಯೂಜ್ ಡೆಸ್ಕ್: 10 ಮತ್ತು 20 ರೂ. ಮುಖಬೆಲೆ ನಾಣ್ಯಗಳನ್ನು ನೀರಾಕರಿಸಿದರೆ ರಿಸರ್ವ್ ಬ್ಯಾಂಕ್ ಆದೇಶದಂತೆ ದೂರು ದಾಖಲಿಸಬಹುದಾಗಿದ್ದು ದೂರು ಸಾಬಿತಾದರೆ IPC ಸೆಕ್ಷನ್ 124A ಅಡಿಯಲ್ಲಿ ಜೈಲು ಶಿಕ್ಷೆ ಆಗಲಿದೆ ಎಂದು ಆದೇಶ ಆಗಿದೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ 10 ಮತ್ತು 20 ರೂಪಾಯಿಯ ನಾಣ್ಯಗಳು ಅಮಾನ್ಯವಾಗಿದೆ ಎಂದು ಸಬೂಬು ಹೇಳಿ ನಾಣ್ಯಗಳನ್ನು ನೀರಾಕರಿಸಿದರೆ ನಾಣ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಶಿಕ್ಷೆ ಬೀಳಲಿದೆ.ಆದ್ದರಿಂದ ಈ ರೀತಿಯ ತಪ್ಪನ್ನು ಮಾಡಲು ಹೋಗಬೇಡಿ ಎಂದು ಅವರು ಎಚ್ಚರಿಕೆ ಆರ್.ಬಿ.ಐ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ 10 ಮತ್ತು 20 ರೂಪಾಯಿ ನಾಣ್ಯಗಳು ಅಮಾನ್ಯವಾಗಿದೆ ಚಲಾವಣೆ ಆಗುವುದಿಲ್ಲ ಎಂಬ ಸುದ್ದಿ ಸಾಮಜಿಕ ಜಾಲ ತಾಣಗಳಲ್ಲಿ ಹಬ್ಬಿತ್ತು.ಅಂಗಡಿ ಮಾಲೀಕರು ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದು ಮಾರುಕಟ್ಟೆಯಲ್ಲಿ ಚಿಲ್ಲರೆ ಸಮಸ್ಯೆಯಿಂದ ವ್ಯಾಪರಸ್ಥರು ಮತ್ತು ಸಾರ್ವಜನಿಕರು ನಾಣ್ಯಗಳ ವಿನಿಮಯ ನಿರಾಕರಣೆಯಿಂದಾಗಿ ತೊಂದರೆಗೆ ಒಳಗಾಗಿದ್ದರು ಈ ಬಗ್ಗೆ ಹೊಸ ಕಾನೂನು ಜಾರಿಗೆ ತಂದಿರುವ ಭಾರತ…

Read More

ಜಾಣ ಕುರುಡು ನೀತಿಯಲ್ಲಿ ಎಪಿಎಂಸಿ ಸಂತೆ ಸುಂಕ ಪಡೆಯುತ್ತಿರುವ ಪುರಸಭೆ ತಾಲೂಕು ಆಡಳಿತ ಸಂಬಂದವಿಲ್ಲದಂತಿದೆ ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ವಾರದ ಸಂತೆಗೆ ಸೂಕ್ತ ಜಾಗವಿಲ್ಲದೆ ಹೆದ್ದಾರಿಯಲ್ಲೆ ನಡೆಯುತ್ತಿದೆ, ಇದು ಹಲವಾರು ಅನಾಹುತಗಳಿಗೆ ಕಾರಣವಾಗಿದ್ದು ಪೋಲಿಸರು ಪುರಸಭೆ ತಾಲೂಕು ಆಡಳಿತ ಕಣ್ಣು-ಕಿವಿ ಮುಚ್ಚಿಕೊಂಡು ಸಂತೆ ನಡೆಯಲು ಸಹಕಾರ ನೀಡಿದಂತಾಗಿದೆ ಎಂದು ಜನತೆ ಹೇಳುತ್ತಿದ್ದಾರೆ.ಶ್ರೀನಿವಾಸಪುರ ಪಟ್ಟಣ ಆರಂಭಂದಿಂದಲು ಈಚಲಕುಂಟೆ ಕೆರೆಗೆ ಹೊಂದಿಕೊಂಡಿರುವ ಅಚ್ಚುಕಟ್ಟು ಪ್ರದೇಶದಲ್ಲಿ ಸಂತೆ ನಡೆಯುತಿತ್ತು, ಅಧಿಕಾರಕ್ಕೆ ಬರುವಂತ ಜನಪ್ರತಿನಿಧಿಗಳು ಸಂತೆ ಮೈದಾನದ ಜಾಗದಲ್ಲಿ ನಿವೇಶನ ರಹಿತರಿಗೆ ಒಂದಷ್ಟು ಜನಕ್ಕೆ ಗುಡಿಸಲು ಹಾಕಿಕೊಳ್ಳಲು ಪರೊಕ್ಷವಾಗಿ ಅವಕಾಶ ಕಲ್ಪಿಸಿದರು ಮುಂದೆ ಒಂದಷ್ಟರ ಜೊತೆಗೆ ಮತ್ತೊಂದಷ್ಟು ಆಯಿತು ಸಂತೆಗೆ ಜಾಗವಿಲ್ಲದಷ್ಟು ಗುಡಿಸಲುಗಳು ತಲೆ ಎತ್ತಿತು,ಮತ್ತೆ ರಾಜಕೀಯ ತಿರುವು ಪಡೆದುಕೊಂಡು ಗುಡಿಸಲು ವಾಸಿಗಳಿಗೆ ಬೃಹದಕಾರವಾಗಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತೆಗೆ ಜಾಗವಿಲ್ಲದಷ್ಟು ಬೃಹದಕಾರವಾಗಿ ಗುಡಿಸಲು ವಾಸಿಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತೆ ವಹಿವಾಟು ಅನಾಮತ್ ಮುಳಬಾಗಿಲು-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಗೆ ಬಂದು ಬಿಟ್ಟಿದೆ ಈಗ ನಡುರಸ್ತೆಯಲ್ಲೆ ಸಂತೆವ್ಯಾಪಾರ ನಡೆಯುತ್ತಿದೆಹೈವೆ ರಸ್ತೆಯಲ್ಲಿ…

Read More

ನಾಡುಕಟ್ಟಿ ಕೆರೆಕಟ್ಟಿ ಜನಚಿಂತಕರಾಗಿ ಆಡಳಿತ ನಡೆಸಿದ ಕೇಂಪೇಗೌಡರು ಶ್ರೀನಿವಾಸಪುರ :ಜನರ ಬದುಕು ಹಸನಾಗಬೇಕು ಜನತೆ ಸುಭಿಕ್ಷವಾಗಿರಬೇಕು ಎಂಬ ಸಹೃದಯದಿಂದ ನಾಡಪ್ರಭು ಕೇಂಪೇಗೌಡರು ಜನರ ಹಿತಚಿಂತಕರಾಗಿ ಆಡಳಿತ ನಡೆಸಿದರು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಅವರು ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿಅತ ವತಿಯಿಂದ ಆಯೋಜಿಸಲಾಗಿದ್ದ ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿ ಮಾತನಾಡಿದರು.ಇವತ್ತು ಇಡಿ ವಿಶ್ವ ಬೆಂಗಳೂರಿನತ್ತ ನೋಡುತ್ತಿದೆ ಕ್ಲೀನ್ ಆಂಡ್ ಗ್ರೀನ್ ಸೀಟಿಯಾಗಿ ಖ್ಯಾತಿ ಪಡೆದಿದೆ ಇದಕ್ಕೆ ಕಾರಣೀಭೂತರು ಕೇಂಪೇಗೌಡರ ಸಾದನೆ ಅವರ ಅಡಳಿತದಲ್ಲಿ ನಗರ ಕಟ್ಟುವ ಜೊತೆಗೆ ನಗರದ ಸುತ್ತಲೂ ಕೆರೆಗಳನ್ನು ನಿರ್ಮಿಸಿದ ಅವರ ಕಾರ್ಯ ಶ್ಲಾಘನೀಯ ದೂರದೃಷ್ಟಿ ವ್ಯಕ್ತಿತ್ವದ ಕೆಂಪೇಗೌಡರು ಒಂದು ಜಾತಿಗೆ ಸಿಮೀತವಲ್ಲ ಅವರ ಆಡಳಿತ ಶೈಲಿ ವಿಶ್ವವ್ಯಾಪಿ ಎಂದರು.ಆಡಳಿತದಲ್ಲಿ ಅಭಿವೃದ್ಧಿಗೆ ಒತ್ತುಕ್ಷೇತ್ರದ ಜನತೆಯ ಋಣ ತೀರಿಸುವ ಜವಬ್ದಾರಿ ಹೊತ್ತಿರುವ ನಾನು ಹಗಲಿರಳು ಸೇವೆಗೆ ಸಿದ್ದನಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಮೊದಲ ಪ್ರಯತ್ನವಾಗಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು ಇದಕ್ಕೆ…

Read More

ಪ್ರಶ್ನಿಸುವ ಜನ ಇದ್ದ ಚಳುವಳಿಗಳ ತವರೂರು ಕೋಲಾರ ಜಿಲ್ಲೆಗೆನಾಗಿದೆ ಕೋಲಾರ:ಇದೇನು ಹೀಗಾಗ್ತಾ ಇದೆ ಕೋಲಾರದ ಆಡಳಿತ ವ್ಯವಸ್ಥೆ.ಎತ್ತ ಸಾಗುತಿದೆ ಕೋಲಾರದ ಸಂಸ್ಕಾರ, ಹಾಡು ಹಗಲೇ ಕಚೇರಿಯಲ್ಲಿ ಬಾಡೂಟದ ಪಾರಾಯಣ,ಕೆಲಸದ ಹೊತ್ತಿನಲ್ಲೇ ಬರ್ತಡೇ ಸೆಲಬರೇಷನ್,ಏನಾಗಿದೆ ಜಿಲ್ಲಾಡಳಿತಕ್ಕೆ ಎಂಬ ಸಾಲು ಸಾಲು ಪ್ರಶ್ನೆಗಳು ಜನರಿಂದ ಕೇಳಿಬರುತ್ತಿದೆ.ಪ್ರಶ್ನೆ ಮಾಡುತ್ತಿದ್ದ ಚಳುವಳಿಗಳ ತವರೂರು ಕೋಲಾರದಲ್ಲಿ ಆಡಳಿತ ಕುಸಿದು ಬಿದ್ದಿದಿಯಾ ವ್ಯವಸ್ಥೆ ಬಗ್ಗೆ ಯಾಕಿಷ್ಟು ಹಳಿ ತಪ್ಪುತ್ತಿದೆ ಯಾರಿಗೂ ಬೇಡವಾಯಿತ ಕೋಲಾರ ಜಿಲ್ಲೆ!ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬಾರದು ಎಂದು ಸರ್ಕಾರದ ಆದೇಶ ಇದ್ದರೂ ಕೋಲಾರ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿದಿಯಾ? ಇದರ ಜೊತೆಗೆ ಸರ್ಕಾರಿ ಕಚೇರಿ ಎಂಬುದನ್ನು ಮರೆತು ಗ್ರಾಮ ಪಂಚಾಯಿತಿ ಕಚೇರಿಯಲ್ಲೆ ಬಾಡೂಟದ ಪಾರಾಯಣ ಹೊರಗೆ ಸಂವಿಧಾನ ಬದ್ದ ರಾಷ್ಟ್ರ ಲಾಂಚನದ ತ್ರಿವವರ್ಣ ಧ್ವಜ ಹಾರಾಟ ಪಂಚಾಯಿತಿ ಕಚೇರಿಯ ಒಳಗೆ ಭರ್ಜರಿ ಬಾಡೂಟ ಸವಿಧ ಅಧಿಕಾರಿಗಳು ನೌಕರರು.ಸರ್ಕಾರಿ ಕಚೇರಿಯಲ್ಲಿ ಕೆಕ್ ಕತ್ತರಿಸಿ ಸಂಭ್ರಮಕೋಲಾರ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೌಕರ ಹರೀಶ್ ಅವರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ…

Read More

ನ್ಯೂಜ್ ಡೆಸ್ಕ್:ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ಲಿಂಗ ರೂಪದಲ್ಲಿ ಅವತರಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿರುವ ಪುಣ್ಯ ಕ್ಷೇತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿದೆ ಎತ್ತರದ ಪರ್ವತ ಶ್ರೇಣಿಗಳು ನಿತ್ಯಹರಿದ್ವರ್ಣ ಕಾಡುಗಳ ನಡುವೆ ಕುಬ್ಜಾ ನದಿಯ ತಟದಲ್ಲಿ ಕಮಲಶಿಲೆ ಎಂಬ ಸುಂದರವಾದ ಊರಿನ ಮಧ್ಯಭಾಗದಲ್ಲಿ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಇದೆ.ಇಲ್ಲಿನ ದೇವಾಲಯದ ವೈಶಿಷ್ಠತೆ ಏನು ಎಂದರೆ ಜಗನ್ಮಾತೆ ಶ್ರೀ ದುರ್ಗಾಮರಮೇಶ್ವರಿಯನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ ಲಿಂಗ ಸ್ವರೂಪಿ ಮಹಾಕಾಳಿ,ಸರಸ್ವತಿ ಮತ್ತು ಮಹಾಲಕ್ಷ್ಮಿ ದೇವಿಯ ಮೂರು ಶಕ್ತಿಗಳ ಸಂಗಮ ಎನ್ನುತ್ತಾರೆ.ಪ್ರಮುಖ ಶಕ್ತಿ ಆರಾಧನಾ ಕೇಂದ್ರಗಳಲ್ಲಿ ಒಂದಾಗಿರುವ ದೇವಾಲಯದಲ್ಲಿ ಲಿಂಗದ ರೂಪದ ಶಿಲೆ ಉದ್ಭವವಾಗಿದ್ದು ವಿಶೇಷ ಪೂಜೆಗಳು ಹಾಗು ಇಲ್ಲಿ ಪ್ರತಿನಿತ್ಯ ಚಂಡಿಕಾ ಹೋಮ ಹವನಗಳು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ.ಈ ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ಪುನೀತರಾಗುತ್ತಾರೆ.ಕಮಲಶಿಲೆಯ ಇತಿಹಾಸಲಿಂಗರೂಪಿ ದರ್ಶನದ ಸಂದರ್ಭದಲ್ಲಿ ಆಸ್ಥಾನದ ನರ್ತಕಿ ಪಿಂಗಳಾ ಎಂಬ ಸದ್ರೂಪಿ ಚಲುವೆ ಕೈಲಾಸ ಪರ್ವತದ ಮೇಲೆ ಶಿವ ಮತ್ತು ಪಾರ್ವತಿ ದೇವಿಯ…

Read More

ಅವ್ಯವಸ್ಥೆಯ ಅಗರ ಇಲ್ಲಿ ಎಲ್ಲವೂ ಸಮಸ್ಯೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಪರಿಣಾಮ ಪ್ರಪಂಚ ಪ್ರಸಿದ್ಧ ಮಾವಿನ ಮಾರುಕಟ್ಟೆಯಲ್ಲಿ ಸರ್ವಂ ಧೂಳಂ ಶ್ರೀನಿವಾಸಪುರ:ಇದು ಪ್ರಪಂಚ ಪ್ರಸಿದ್ಧ ಮಾವಿನ ಕಾಯಿ ಮಾರುಕಟ್ಟೆ ಭಾರತದ ಬಹುತೇಕ ಮಾವು ಮಾರುಕಟ್ಟೆಗಳಿಗೆ ನೇರಸಂಪರ್ಕ ಹೊಂದಿರುವಂತ ಬೃಹತ್ ಮಾವು ಮಾರುಕಟ್ಟೆ ಆದರೆ ಇಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸುವ ಸೌಜನ್ಯ ಕರ್ನಾಟಕ ಸರ್ಕಾರದ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಇಲ್ಲದಿರುವುದು ದುರಂತ ಎನ್ನಬಹುದು.ರಾಷ್ಟ್ರೀಯ ಹೆದ್ದಾರಿ 64 ಶ್ರೀನಿವಾಸಪುರ-ಚಿಂತಾಮಣಿ ರಸ್ತೆಗೆ ಹೊಂದಿಕೊಂಡಂತೆ ಸುಮಾರು 19.5 ಎಕರೆಯಲ್ಲಿ ಖಾಸಗಿ ವ್ಯಕ್ತಿಗಳು 7.5 ಅತಿಕ್ರಮಿಸಿಕೊಂಡಿದ್ದು ಅದರಲ್ಲಿ ಸುಮಾರು 2 ಎಕರೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ವಾಪಸ್ಸು ಪಡೆದರಾದರು ಉಳಿದ 5.5 ಎಕರೆ ಬಲಿಷ್ಟ ಖಾಸಗಿ ವ್ಯಕ್ತಿಗಳಿಂದ ಬಿಡಿಸಿ ಕೊಳ್ಳಲಾಗದೆ ಬಿಟ್ಟಿದ್ದಾರೆ ಉಳಿದ 10 ಎಕರೆ ಮಾರುಕಟ್ಟೆ ಪ್ರದೇಶದಲ್ಲಿ ಸುಮಾರು ಮೂರು ಎಕರೆಯಲ್ಲಿ ಟಮ್ಯಾಟೊ ಹಾಗು ದಿನಹಿ ತರಕಾರಿ ಹರಾಜು ಹೊರತು ಪಡಿಸಿದರೆ ಉಳಿದ ಎಲ್ಲಾ ಭಾಗದಲ್ಲಿ ಮ್ಯಾಂಗೊ ಸಿಸನಬಲ್…

Read More

ಜಾಲಪ್ಪ ನಾರಾಯಣ ಹೃದಯಾಲಯದಿಂದ ಪತ್ರಕರ್ತರಿಗೆ ಪ್ರಿವಿಲೇಜ್ ಕಾರ್ಡ್ ವಿತರಣೆ ಸೂಕ್ತ ಚಿಕಿತ್ಸೆ ನೀಡಲು ಗೋಪಿನಾಥ್ ಮನವಿ ಕೋಲಾರ:ಕೋವಿಡ್ ನಂತರದಲ್ಲಿ ಆಗುತ್ತಿರುವ ಹೃದಯಾಘಾತಗಳಿಗೆ ಕೊರೊನಾ ಲಸಿಕೆಯೇ ಇದಕ್ಕೆ ನಿಶ್ಚಿತ ಕಾರಣವಲ್ಲ ಎಂದು ಜಾಲಪ್ಪ ಆಸ್ಪತ್ರೆಯ ತಜ್ಞ ವೈದ್ಯ ಡಾ.ಮುರಳಿ ಬಾಬು ಹೇಳಿದರು ಅವರು ಕೋಲಾರ ನಗರದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆರ್.ಎಲ್.ಜಾಲಪ್ಪ ನಾರಾಯಣ ಹೃದಯಾಲಯ 14 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಆದ್ಯತೆ ಮೇಲೆ ಹಾಗೂ ರಿಯಾಯಿತಿ ದರದ ಚಿಕಿತ್ಸೆಗಾಗಿ ಪ್ರಿವಿಲೇಜ್ ಕಾರ್ಡ್ (ಹೆಲ್ತ್ ಕಾರ್ಡ್) ಅನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿಜುಲೈ 1ರಂದಿನ ಪತ್ರಿಕಾ ದಿನಾಚರಣೆ ಕೊಡುಗೆಯಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಹಂತವಾಗಿ ಕೋಲಾರ ನಗರದ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ನೀಡಲಾಗಿದ್ದು ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ನಾರಾಯಣ ಹೃದಯಾಲಯ ಘಟಕವು 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 8 ತಿಂಗಳ ಮಕ್ಕಳಿಂದ ಹಿಡಿದು 72 ವರ್ಷ ವಯೋವೃದ್ಧರವರೆಗೆ…

Read More

ನ್ಯೂಜ್ ಡೆಸ್ಕ್: ಸುಮಾರು ಎರಡು ವರೆ ವರ್ಷಗಳ ಹಿಂದೆ ಈಗಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಪಥ ಮಾಡಿದ್ದರು ಮತ್ತೆ ನಾನು ಮುಖ್ಯಮಂತ್ರಿ ಆಗುವವರಿಗೂ ಅಸಂಬ್ಲಿಗೆ ಕಾಲಿಡಲ್ಲ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದ ಅವರು ಅಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗು ಮಂತ್ರಿಗಳ ವಿರುದ್ದ ತೀವ್ರಧಾಟಿಯಲ್ಲಿ ವಾಗ್ದಾಳಿ ನಡೆಸಿ ನನ್ನ ಹಾಗು ನನ್ನ ಪತ್ನಿಯನ್ನು ಸಾರ್ವಜನಿಕವಾಗಿ ಕೇವಲವಾಗಿ ಮಾತನಾಡುವ ಮೂಲಕ ನನ್ನ ವೈಯುಕ್ತಿಕ ಜೀವನದ ಬಗ್ಗೆ ಅಸಹ್ಯಕರವಾಗಿ ವ್ಯಂಗ್ಯವಾಗಿ ಮಾತನಾಡಿ ಅಪಮಾಸಿದ್ದಾರೆ.ಇಲ್ಲಿ ಅಸೆಂಬ್ಲಿ ಸಮಾವೇಶ ನಡೆಸುತ್ತಿಲ್ಲ ಇದು ಗೌರವ ಸಭೆ ಅಲ್ಲ, ಕೌರವರ ಸಭೆ ಎಂದು ಕಣ್ಣಿರಿಡುತ್ತ ಅಸೆಂಬ್ಲಿಯಿಂದ ಹೊರಬಂದಿದ್ದರು.ಅಂದು ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೆಶಂ ಪಕ್ಷ ಕೆವಲ 23 ಸೀಟುಗಳನ್ನು ಸ್ಥಾನಗಳಿಗೆ ಸೀಮಿತವಾಗಿತ್ತು.ಈದಾದ ನಂತರ ರಾಜಕೀಯ ಬೆಳವಣಿಗೆಯಲ್ಲಿ ಭ್ರಷ್ಠಾಚಾರದ ಆರೋಪದಲ್ಲಿ ಚಂದ್ರಬಾಬು ನಾಯ್ಡು ಬಂಧನವಾಯಿತು ಇದನ್ನು ವಿರೋಧಿಸಿ ಆಂಧ್ರದಲ್ಲಿ ಅಷ್ಟೆ ಅಲ್ಲ ತೆಲಂಗಾಣ ತಮಿಳುನಾಡು ಕರ್ನಾಟಕ ಸೇರಿದಂತೆ ದೇಶ ವಿದೇಶಗಳಲ್ಲಿ ತೆಲಗುದೆಶಂ ಕಾರ್ಯಕರ್ತರು ಹಾಗು ದಿವಂಗತ ಎನ್.ಟಿ.ಆರ್…

Read More

ನ್ಯೂಜ್ ಡೆಸ್ಕ್:ಕರ್ನಾಟಕದ ಹೆಮ್ಮೆಯ HMT ಸಂಸ್ಥೆಗೆ ಪುನರ್ ವೈಭವ ತರುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆಗಳ ಸಚಿವ ಎಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ ಇದಕ್ಕೆ ಪೂರಕ ಎನ್ನುವಂತೆ ಅವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಮೆಷಿನ್ ಅಂಡ್ ಟೂಲ್ಸ್ (HMT) ನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನಾರೋಗ್ಯದ ಪರಿಸ್ಥಿತಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ HMTಯನ್ನು ಪುನಶ್ಚೇತನಗೊಳಿಸಲು ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸಂಸ್ಥೆಯ ಹಣಕಾಸಿನ ಬಿಕ್ಕಟ್ಟು,ಎದುರಿಸುತ್ತಿರುವ ಮೊಕದ್ದಮೆಗಳು,ವಿವಿಧ ರಿತಿಯ ಸಮಸ್ಯೆಗಳು ಮತ್ತು ಒಟ್ಟಾರೆ ನಷ್ಟ ಸೇರಿದಂತೆ ವಿವರಿಸಿದ್ದಾರೆ ಎನ್ನಲಾಗಿದ್ದು ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯತೆಯನ್ನು ಅವರು ವಿವರಿಸಿದ್ದಾರೆ. ಒಂದು ಕಾಲದಲ್ಲಿ ಘನ ವೈಭವದಲ್ಲಿದ್ದ HMT ಪ್ರಸ್ತುತ ಈಗಿನ ಪರಿಸ್ಥಿತಿಯಲ್ಲಿ ಗಮನಾರ್ಹವಾದ ಸವಾಲುಗಳನ್ನು ಎದುರಿಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಎಚ್ ಡಿ ಕುಮಾರಸ್ವಾಮಿ ಸಂಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕವಾಗಿ ಶಕ್ತಿ ತುಂಬಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು…

Read More