ಶ್ರೀ ಚೌಡೇಶ್ವರಿ ಅಮ್ಮನ ಸಮೇತ 12 ಊರ ದೇವರುಗಳ 11 ಪಲ್ಲಕ್ಕಿ ಜಾತ್ರಾ ಮಹೋತ್ಸವ ಹಾಗು ಶ್ರೀ ದ್ರೌಪದಮ್ಮ ದೇವಿ ಕರಗದ ಉತ್ಸವ ಸಂಭ್ರಮ ಸಡಗರದಿಂದ ಜರುಗಿತು.ಸಾಂಸ್ಕೃತಿಕ ಮೆರಗು ಹೆಚ್ಚಿಸುವ ಆಚರಣೆಗಳಲ್ಲಿ ಒಂದಾದ ಊರ ಹಬ್ಬ ಹಾಗು ಕರಗ ಮಹೋತ್ಸವ ಊರಿನ ಜನರಲ್ಲಿ ಸಂಭ್ರಮದ ನೆನಪು ಅಚ್ಚಳಿಯದ ಉಳಿಸುವಂತಹದು.ಊರ ದೇವರುಗಳ ಪಲ್ಲಕ್ಕಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಪಟ್ಟಣದಾದ್ಯಂತ ರಥ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯಗಳು ಬೀದಿ ಎಂದು ಗುರುತಿಸುವ ವಲ್ಲಭಾಯ್ ರಸ್ತೆ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಜಗಮಗಿಸುತಿತ್ತು.ಕರಗ ಮಹೋತ್ಸವ ಊರಿನ ಯುವ ಸಮುದಾಯದಲ್ಲಿ ವಿಶಿಷ್ಟ ಅನುಭುತಿ ನೀಡುತ್ತದೆ.ಕರಗಧಾರಿ ರಾತ್ರಿಯಿಡೀ ವೀರಪುತ್ರರೊಂದಿಗೆ ಕೂಡಿ ಪಟ್ಟಣದ ಬೀದಿಗಳಲ್ಲಿ ಹೆಜ್ಜೆ ಹಾಕುತ್ತ ಸಾಗುತ್ತಿದ್ದರೆ ಅವರೊಟ್ಟಿಗೆ ಯಾವುದೆ ಬೇದಭಾವ ಇಲ್ಲದೆ ಎಲ್ಲರೂ ಕೂಡಿ ವಿಶೇಷವಾಗಿ ಯುವ ಸಮುದಾಯ ಜಾಗರಣೆ ಇದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಶ್ರೀನಿವಾಸಪುರ:ನೂತನ ಸಂವತ್ಸರ ಆಚರಣೆ ಹಿನ್ನಲೆಯಲ್ಲಿ ಯುಗಾದಿ ಅಂಗವಾಗಿ ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ…
Author: Srinivas_Murthy
ಕಾಣಿಪಾಕಂ ವರಸಿದ್ಧಿ ವಿನಾಯಕ ದೇವಾಲಯದ ಪ್ರಧಾನ ಅರ್ಚಕರಾದ ಗಣೇಶ್ ಗುರುಕುಲ್ ಅವರ ಸೇವೆಯನ್ನು ಗುರುತಿಸಿ ಆಂಧ್ರಪ್ರದೇಶ ಸರ್ಕಾರ ಯುಗಾದಿ ಪ್ರಶಸ್ತಿ ನೀಡಿ ಗೌರವಿಸಿದೆ.ಮೂಲತಃ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿ ಸಾತಾಂಡ್ಲಹಳ್ಳಿ ಗ್ರಾಮದವರಾದ ಅರ್ಚಕ ಗಣೇಶ್ ಅಪ್ಪಟ ಕನ್ನಡಿಗರು ಅವರು ಸಾತಾಂಡ್ಲಹಳ್ಲಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಎಸ್.ಎಸ್.ಎಲ್.ಸಿ ವರಿಗೂ ನಂಬಿಹಳ್ಳಿ ಪ್ರೌಡಶಾಲೆಯಲ್ಲಿ ಓದಿದ ಅವರು ಶ್ರೀನಿವಾಸಪುರದಲ್ಲಿ ಪಿಯುಸಿ ಹಾಗು ಪದವಿ ಪೊರೈಸಿದ್ದು ನಂತರ ಅವರು ಆಂಧ್ರದಲ್ಲಿ ವೇದಾಭ್ಯಾಸ ಮಾಡಿ ಕಾಣಿಪಾಕಂ ವಿನಾಯಕ ದೇವಾಲಯದಲ್ಲಿ ಮೂರು ದಶಕಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಈಗ ಪ್ರಭಾರೆ ಪ್ರಧಾನ ಅರ್ಚಕರ ಹುದ್ಧೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಂಧ್ರ ಸರ್ಕಾರ ಗುರುತಿಸಿ ಯುಗಾದಿಯ ಭಾನುವಾರದಂದು ನಡೆದಂತ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಆಂಧ್ರ ಸರ್ಕಾರದ ಯುಗಾದಿ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಚಂದ್ರಬಾಬುನಾಯ್ಡು ನೇತೃತ್ವದ ಎನ್.ಡಿ.ಎ ಸರ್ಕಾರ ಮತ್ತೆ ಆರಂಭಿಸಿದ್ದು ಸಾಹಿತ್ಯ, ಸಂಗೀತ,ನೃತ್ಯ, ಕಲೆ,ಪತ್ರಿಕೋದ್ಯಮ, ಹಾಸ್ಯ, ಮಕ್ಕಳ ಸಾಹಿತ್ಯ,…
ಶ್ರೀನಿವಾಸಪುರ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀನಿವಾಸಪುರ ಪಟ್ಟಣದಲ್ಲಿ ಯುಗಾದಿ ಹಬ್ಬದಂದು ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಸಪ್ತಮಾತೃಕೆಯರ ಪಲ್ಲಕಿ ಉತ್ಸವಳ ಜಾತ್ರಾ ಮಹೋತ್ಸವದಂದು ರಾತ್ರಿ ಕರಗ ನಡೆಸುವುದು ಇಲ್ಲಿ ಸಂಪ್ರದಾಯವಾಗಿದ್ದು ಈ ಬಾರಿ ಕರಗವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.ವಿಜೃಂಭಣೆಯಿಂದ ನಡೆದ ಹಸಿ ಕರಗಯುಗಾದಿಯಂದು ನಡೆಯುವ ಹಸಿಕರಗದ ಉತ್ಸವ ಯುಗಾದಿ ಮುನ್ನಾ ದಿನ ರಾತ್ರಿ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಿ ಆರಂಭವಾಯಿತು ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಿದ ಕಳಶದ ಆಕೃತಿಯ ಹಸಿಕರಗಕ್ಕೆ ಕರಗದ ಪೂಜಾರಿಗಳು ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು ಕರಗ ಹೊರಲಿರುವ ಕರಗದ ಪೂಜಾರಿ ಹೋಳೂರಿನ ವೆಂಕಟೇಶಪ್ಪ ಹಾಗು ಸಂಗಡಿಗರು ಹಸಿ ಕರಗ ಮಡಿಲಲ್ಲಿ ಇರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. ಶ್ರೀ ಚೌಡೇಶ್ವರಿ ದೇವಾಲಯದಿಂದ ಆರಂಭವಾದ ಹಸಿ ಕರಗ ಕಟ್ಟೆಕೆಳಗಿನ ಪಾಳ್ಯ ಅಲ್ಲಿನ ಶ್ರೀನಿವಾಸನ ದೇವಸ್ಥಾನ,ವಲ್ಲಭಾಯ್ ರಸ್ತೆ ಶಂಕರಮಠ ವೃತ್ತ ಹಳೇಪೇಟೆ ಮುಳಬಾಗಿಲು ವೃತ್ತ…
ಶ್ರೀನಿವಾಸಪುರ:ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಬಿ. ಆರ್ .ಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆದ 2025 -26 ನೇ ಸಾಲಿನ ಪುರಸಭೆಯಆಯ-ವ್ಯಯ ಸಭೆಯಲ್ಲಿ ಸುಮಾರು 87 ಲಕ್ಷ ಬಜೆಟ್ ಮಂಡಿಸಲಾಯಿತು.ಪುರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಭಾಸ್ಕರ್ ಪಟ್ಟಣದ ವ್ಯಾಪ್ತಿಯಲ್ಲಿನ ಕೆಲ ಖಾಸಗಿ ಶಿಕ್ಷಣ ಸಂಸ್ಥೆ ಮಾಲಿಕರು ಹಾಗು ಕೆಲ ವಾಣಿಜ್ಯ ಮಳಿಗೆಗಳ ಮಾಲೀಕರು ಅನೇಕ ವರ್ಷಗಳಿಂದ ಕಂದಾಯವನ್ನು ಕಟ್ಟಿಲ್ಲ ಇಂತವರು ಪಟ್ಟಣದ ಅಭಿವೃದ್ಧಿಗಾಗಿ ಸಹಕರಿಸಬೇಕೆಂದು ಮನವಿ ಮಾಡಿದರು. ಈ-ಸ್ವತ್ತು ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು,ಈ-ಸ್ವತ್ತು ಮಾಡಿಸಿಕೊಳ್ಳದವರು ನಿಗಧಿತ ಅವಧಿಯೊಳಗೆ ಈ-ಸ್ವತ್ತು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.ಕಟ್ಟೆಕೆಳಗಿನ ಪಾಳ್ಯವನ್ನು ಕೊಳಚೆ ನಿರ್ಮೂಲನ ಪ್ರದೇಶ ಎಂದು ಘೋಷಣೆ ಮಾಡುವ ವಿಚಾರ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಿಗೆ ಪುಟ್ಪಾತ್ ನಿರ್ಮಾಣ ಮಾಡುವುದು ಸಭೆಯಲ್ಲಿ ಸಂಕ್ಷಿಪ್ತವಾಗಿ ಚರ್ಚೆಸಲಾಯಿತು.ಮನೆ ಕಂದಾಯ ಪರಿಷ್ಕರಣೆ,ಮಳಿಗೆ ಬಾಡಿಗೆ,ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪುರಸಭೆ ಅಧ್ಯಕ್ಷರು 2025-26ನೇ ಸಾಲಿನಲ್ಲಿ 87,56,000 ಉಳಿತಾಯ…
ನ್ಯೂಜ್ ಡೆಸ್ಕ್:ಸ್ವಿಗ್ಗಿ ಡೆಲಿವರಿ ಬಾಯ್ ಅಪಾರ್ಟ್ಮೆಂಟ್ ನಿವಾಸಿಗೆ ‘ಬ್ರೋ’ ಎಂದು ಸಂಬೋಧಿಸಿದ್ದಕ್ಕೆ ಕೋಪಗೊಂಡ ಫ್ಲಾಟ್ ನಿವಾಸಿ ಡಿಲವರಿ ಬಾಯ್ ಅನ್ನು ಅಮಾನವೀಯವಾಗಿ ಹಲ್ಲೆ ಮಾಡಿರುವ ಧಾರುಣ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ನಡೆದಿದೆ.ಫುಡ್ ಡಿಲವರಿ ಬಾಯ್ ಮೇಲೆ ಹಲ್ಲೆ ಮಾಡಿದ ಅಪಾರ್ಟ್ಮೆಂಟ್ ನಿವಾಸಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡೆಲಿವರಿ ಬಾಯ್ಸ್ ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ವಿಶಾಖಪಟ್ಟಣಂ ನಗರದ ಸೀತಾಮಧಾರ ಪ್ರದೇಶದ ಆಕ್ಸಿಜನ್ ಟವರ್ಸ್ ಅಪಾರ್ಟಮೆಂಟ್ ನ ‘ಬಿ’ ಬ್ಲಾಕ್ ನ 29 ನೇ ಮಹಡಿಯ ಫ್ಲಾಟ್ 2914 ರಲ್ಲಿ ವಾಸಿಸುವ ಪ್ರಸಾದ್ ಅವರಿಗೆ ಸ್ವಿಗ್ಗಿಯಲ್ಲಿನ ಆಹಾರ ಆರ್ಡರ್ ಅನ್ನು ವಿತರಿಸಲು ಡೆಲಿವರಿ ಬಾಯ್ ಅನಿಲ್, ಆಹಾರ ಪಾರ್ಸೆಲ್ ತೆಗೆದುಕೊಂಡು ಮಧ್ಯಾಹ್ನದ ಹೊತ್ತಿಗೆ ಬಂದಿದ್ದಾನೆ ನಿವಾಸಿ ಮನೆ ಮುಂದೆ ನಿಂತು ಕರೆಗಂಟೆ ಬಾರಿಸುತ್ತಿದ್ದಂತೆ ಒರ್ವ ಮಹಿಳೆ ಬಂದು ಬಾಗಿಲು ತೆಗೆದಿದ್ದಾಳೆ ಡಿಲವರಿ ಬಾಯ್ ಅನಿಲ್ ಮಾತು ಆಕೆಗೆ ಅರ್ಥವಾಗದ ಕಾರಣ, ಅಕೆ ಮನೆಯೊಳಗೆ ಹೋಗಿ ಮಾಲಿಕನನ್ನು ಕರೆತಂದಿದ್ದಾಳೆ ಮಾಲಿಕ ಪ್ರಸಾದ್ ಹೊರಗೆ…
ಬೆಂಗಳೂರು:ಬೆಂಗಳೂರಿನ ಪ್ರಖ್ಯಾತ ಹಳೇಯ ಕೋಆಪರೇಟಿವ್ ಬ್ಯಾಂಕ್ ಗಳಲ್ಲಿ ಒಂದಾದ ದಿ. ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ(The GRAIN MERCHANTS CO-OPERATIVE BANK LTD)ನೂತನ ಅಧ್ಯಕ್ಷರಾಗಿ ಶ್ರೀನಿವಾಸಪುರ ತಾಲೂಕು ಯಲ್ದೂರಿನ ವಕೀಲ ಆನಂದಬಾಬು ಆಯ್ಕೆಯಾಗಿದ್ದಾರೆ.ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿರುವ ದಿ. ಗ್ರೈನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ 1927 ರಲ್ಲಿ ತನ್ನ ವಹಿವಾಟು ಪ್ರಾರಂಭಿಸಿದ್ದು ಬೆಂಗಳೂರಿನಾದ್ಯಂತ ಮೂರು ಶಾಖೆಗಳನ್ನು ಹೊಂದಿದೆ. 98 ವರ್ಷಗಳ ಹಳೆಯದಾದ ಸಹಕಾರಿ ತತ್ವದ ಬ್ಯಾಂಕ್ ವಾರ್ಷಿಕ ಸುಮಾರು 300 ಕೋಟಿ ರೂಪಾಯಿ ವಹಿವಾಟು ನಡೆಸಲಿದ್ದು ಕಮರ್ಷಿಯಲ್ ಬ್ಯಾಂಕುಗಳಂತೆ ಗ್ರಾಹಕರಿಗೆ ಎಲ್ಲಾ ರಿತಿಯ ಅನ್ಲೈನ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.ಮೂಲತಃ ಯಲ್ದೂರಿನ ವಕೀಲ ಆನಂದಬಾಬುಶ್ರೀನಿವಾಸಪುರ ತಾಲೂಕಿನ ಯಲ್ದೂರಿನವರಾದ ವಕೀಲ ಆನಂದಬಾಬು ಯಲ್ದೂರಿನ ಹಿರಿಯ ರಾಜಕಾರಣಿ ಹಾಗು ಸಹಕಾರಿ ಧುರೀಣರಾಗಿದ್ದ ದಿ.ರಾಮಕೃಷ್ಣಪ್ಪನವರ ಮಗ ಕೃಷಿಕ ಕುಟುಂಬದ ಹಿನ್ನಲೆಯವರಾಗಿದ್ದು ಯಲ್ದೂರಿನ ರೇಷ್ಮೆ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ತಮ್ಮ ಮಕ್ಕಳು ಸಹ ರಾಜಕಾರಣದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಬಯಸಿದ್ದರು ಅದಕ್ಕಾಗಿ…
ಕಾಟಮುರಾಯುಡ ಕದರಿ ನರಸಿಂಹುಡಾ ಬ್ಯಾಟ್ರಾಯಸ್ವಾಮಿ ದೇವುಡಾ ಎಂದು ಕದಿರಿ ಶ್ರೀ ಲಕ್ಷ್ಮೀ ನರಸಿಂಹನನ್ನು ಭಕ್ತರು ಪ್ರೀತಿಯಿಂದ ಅರಾಧಿಸುತ್ತಾರೆ. ಮೊದಲಿಗೆ ವೇಟರಾಯ ಸ್ವಾಮಿ ದೇವುಡ ಎಂದಿತ್ತು ಮುಂದೆ ಅದನ್ನು ಕನ್ನಡಿಗರು ಬ್ಯಾಟ್ರಾಯ ಸ್ವಾಮಿ ಎಂದ ಕಾರಣ ಇವತ್ತಿಗೂ ಅದೆ ಚಾಲ್ತಿಯಲ್ಲಿದೆ ಎನ್ನಲಾಗಿದೆ.ಭಕ್ತರು ನಂಬುವಂತೆ ಇಲ್ಲಿಯೇ ಭಗವಾನ್ ನರಸಿಂಹ ಖಾದ್ರಿ ಎಂಬ ಮರದಿಂದ ಮಾಡಿದ ಕಂಬದಲ್ಲಿ ಉದ್ಭವಿಸಿ ಹಿರಣ್ಯಕಶಿಪುವನ್ನು ಸಂಹರಿಸಿದ ಘಟನೆ ಕದಿರಿ ಬಳಿಯ ಗೊಡ್ಡುವೇಲಗಲ ಗ್ರಾಮದಲ್ಲಿ ನಡೆದಿದೆ ಎಂದು ಸ್ಥಳ ಪುರಾಣಾದಲ್ಲಿ ಹೇಳಲಾಗುತ್ತದೆ. ಖಾದ್ರಿ ಮರ ಮುಂದೆ ಆಡುಭಾಷೆಯಲ್ಲಿ ಕದಿರಿ ಎಂದು ಕರೆಯಲಾಗಿದೆ ಎಂಬುದು ಸ್ಥಳೀಯರ ಮಾತು. ಇಷ್ಟೆ ಅಲ್ಲ ಭಗವಂತ ನರಸಿಂಹನನ್ನು ವಸಂತ ವಲ್ಲಭ ಎಂದೂ ಪ್ರಹ್ಲಾದ ವರದಾ ನಾರಸಿಂಹ ದೇವರು ಎಂದು ಪೂಜಿಸುತ್ತಾರೆ. ನ್ಯೂಜ್ ಡೆಸ್ಕ್:ಆಂಧ್ರದಲ್ಲಿರುವ ಪ್ರಖ್ಯಾತ ಪುಣ್ಯ ಕ್ಷೇತ್ರ ಕದಿರಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ಭ್ರಹ್ಮರಥೋತ್ಸವ ತೀರಾ ಇತ್ತಿಚಿಗೆ ಲಕ್ಷಾಂತರ ಜನ ಸಮೂಹದ ನಡಿವೆ ನಮೋ ನಾರಸಿಂಹ..ಹಾಗು ಗೋವಿಂದ ಗೋವಿಂದ ನಾಮಗಳೊಂದಿಗೆ ಎಂದು ವಿಜ್ರಂಭಣೆಯಿಂದ ನಡೆಯಿತು.ಆಂಧ್ರದ ಅನಂತಪುರಂ ಜಿಲ್ಲೆಯ…
ಶ್ರೀನಿವಾಸಪುರ:ತಾಲೂಕಿನಲ್ಲಿ ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರು ಎಂದು ಖ್ಯಾತರಾಗಿರುವ ಉತ್ತನೂರು ಪ್ರೌಡಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ವೆಂಕಟರೆಡ್ಡಿ ಅವರನ್ನು ಆಂಧ್ರದ ತಿರುಪತಿಯಲ್ಲಿ ಅವರ ಹಳೇಯ ವಿಧ್ಯಾರ್ಥಿಗಳು ವರ್ಣರಂಜಿತ ಸಮಾರಂಭದಲ್ಲಿ ಸನ್ಮಾನಿಸಿದ್ದಾರೆ.ವೆಂಕಟರೆಡ್ಡಿ ಮೇಷ್ಟ್ರು ಈ ಹಿಂದೆ ಮುಳಬಾಗಿಲಿನ ರಾಮಪ್ರಿಯ ಟೀಚರ್ ಟ್ರೈನಿಂಗ್ ಕಾಲೇಜಿನ( ರಾಮಪ್ರಿಯ ಟಿಸಿಹೆಚ್ ಕಾಲೇಜು) ಪ್ರಿನ್ಸಿಪಾಲರಾಗಿದ್ದರು ಈ ಸಂದರ್ಬದಲ್ಲಿ 1989-90 ಸಾಲಿನ ವಿಧ್ಯಾರ್ಥಿಗಳಲ್ಲಿ ಬಹುತೇಕರು ಆಂಧ್ರದವರೆ ಎನ್ನುವುದು ವಿಶೇಷ ಆ ಸಾಲಿನಲ್ಲಿ ಓದಿದಂತ ಆಂಧ್ರದ ವಿವಿಧ ಜಿಲ್ಲೆಗಳ ವಿಧ್ಯಾರ್ಥಿಗಳು ತಮ್ಮ 36 ವರ್ಷದ ಹಳೆಯ ನೆನಪುಗಳನ್ನು ಮೆಲಕು ಹಾಕಿಕೊಳ್ಳಲು ಒಂದು ಜಾಗದಲ್ಲಿ ಒಗ್ಗೂಡಲು ನಿರ್ಧರಿಸಿದ್ದು ಅವರೊಂದಿಗೆ ತಮಗೆ ಪಾಠ ಮಾಡಿದ ಮೇಷ್ಟ್ರುಗಳನ್ನು ಉಪನ್ಯಾಸಕರನ್ನು ಕರೆಸಿಕೊಂಡಿದ್ದ ವಿದ್ಯಾರ್ಥಿಗಳು ತಿರುಪತಿ ನಗರ ಪಾಲಿಕೆ ಪ್ರಾಥಮಿಕ ಪಾಠಾಶಾಲೆ ಮುಖ್ಯೋಪಾದಾಯ ಮುನಿಕೃಷ್ಣ ನೇತೃತ್ವದಲ್ಲಿ ತಿರುಪತಿಯ ಬಾಲಾಜಿ ಕಾಲೋನಿಯ ಖಾಸಗಿ ಶಾಲೆಯಲ್ಲಿ ಆಯೋಜಿಸಿದ್ದ ಸ್ನೇಹಬಂಧಮ್ ಕಾರ್ಯಕ್ರಮದಲ್ಲಿ ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟರೆಡ್ಡಿ ಮೂರು ದಶಕಗಳ ಹಿಂದೆ ವಿದ್ಯಾರ್ಥಿಗಳಾಗಿದ್ದವರು ಇಂದು ಶಿಕ್ಷಕರಾಗಿ ಖಾಸಗಿ ಶಾಲೆ ಸರ್ಕಾರಿ…
ನೂತನ ಸಂವತ್ಸರ ಯುಗಾದಿ ಮುನ್ನ ತಾಲೂಕಿನಲ್ಲಿ ಮಳೆಯಾಗಿರುವುದು ರೈತಾಪಿ ಜನರಿಗೆ ಆಶಾಭಾವನೆ ಮೂಡಿಸಿದ್ದು ಅವಧಿಗೂ ಮುನ್ನವೇ ಮುಂಗಾರು ಮಳೆ ಪ್ರಾರಂಭವಾಗಿದೆ ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತರು. ಶ್ರೀನಿವಾಸಪುರ:ಮಳೆ ಬರಲಿ… ಮಳೆ ಬರಲಿ… ಅಂತಾ ಕಳೆದ ಹಲವು ತಿಂಗಳುಗಳಿಂದ ಜನ ಪರಿತಪಿಸುತ್ತಿದ್ದರು ಕಳೆದೊಂದು ತಿಂಗಳಿನಿಂದ ಬಿಸಿಲಿನ ಝಳಕ್ಕೆ ಭೂಮಿ ಕಾದು ಕೆಂಡವಾಗಿತ್ತು ಬಿಸಿಲಾಘಾತಕ್ಕೆ ಜನ ರೋಸಿ ಹೋಗಿದ್ದುರು ಇಂತಹ ಪರಿಸ್ಥಿತಿಯಲ್ಲಿ ವಾತವರಣವನ್ನು ತಂಪಾಗಿಸಲು ವರುಣ ಕರುಣಿಸಿದ್ದಾನೆ, ಬಿಸಿಲಿನ ಶಾಖಕ್ಕೆ ತಳಮಳಿಸಿರುವ ಜನರಿಗೆ ಇಂದು ಸುರಿದ ಆರ್ಭಟದ ಮಳೆ ತಂಪು ನೀಡಿದೆ. ಮಳೆಯ ಆಗಮನದಿಂದಾಗಿ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಅರ್ಭಟದ ಮಳೆಗೆ ಕೃಷಿಕರಿಗೆ ನಷ್ಟಯುಗಾದಿಗೆ ಮುನ್ನವೇ ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ ಆದರೂ ತಾಲೂಕಿನಲ್ಲಿ ಬಿದ್ದಿರುವ ಗುಡುಗು,ಮಿಂಚು ಆಲಿಕಲ್ಲು ಮತ್ತು ಬಿರುಗಾಳಿ ಸಹಿತ ಮಳೆಯಿಂದ ಅಡ್ದಗಲ್ ನೆಲವಂಕಿ ಲಕ್ಷ್ಮೀಪುರ ರೋಣೂರು ಭಾಗದಲ್ಲಿನ ತೋಟಗಾರಿಕೆ ಬೆಳೆಗಾರರಿಗೆ ಬಾರಿ ಪ್ರಮಾಣದ ನಷ್ಟ ಉಂಟಾಗಿರುವ ಬಗ್ಗೆ ಹೇಳಲಾಗಿದೆ ಆಲಿಕಲ್ಲು ಮತ್ತು…
ನ್ಯೂಜ್ ಡೆಸ್ಕ್:ಕೆಎಸ್ಆರ್ ಬೆಂಗಳೂರು-ಕೋಲಾರ ನಡುವೆ ಓಡಾಡುವ ಮೆಮೊ ರೈಲು ಚಿಕ್ಕಬಳ್ಳಾಪುರದಲ್ಲಿ ಕೆಟ್ಟು ನಿಂತ ಘಟನೆ ನಡೆದಿದ್ದು ರೈಲಿನಲಿದ್ದ ಪ್ರಯಾಣಿಕರಿಗೆ ಬದಲಿ ಸಾರಿಗೆ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಪ್ರಯಾಣಿಕರ ಇನ್ನಿಲ್ಲದಂತೆ ಪರದಾಡಿರುವ ಘಟನೆ ಇಂದು ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರದ ರೈಲು ನಿಲ್ದಾಣದಲ್ಲಿ ನಡೆದಿರುತ್ತದೆ.ಕೆಎಸ್ಆರ್ ಬೆಂಗಳೂರು-ಕೋಲಾರ ನಡುವೆ ಓಡಾಡುವ ಮೆಮೊ ರೈಲು ಎಂದಿನಂತೆ ಸಂಜೆ ಸುಮಾರು 6.20 ಗಂಟೆ ಸಮಯದಲ್ಲಿ ಕೆಎಸ್ಆರ್ ಬೆಂಗಳೂರುನಿಂದ ಅರಂಭವಾಯಿತು ಯಲಹಂಕ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದರು ಯಾಕೆ ಮತ್ತೆ ದೇವನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಅರ್ದಗಂಟೆಗೂ ಹೆಚ್ಚು ಕಾಲ ನಿಲ್ಲಿಸಿದ್ದು ತಜ್ಞರು ಬಂದಿದ್ದಾರೆ ರೈಲು ರೀಪೆರಿ ಆಗುತ್ತಿದೆ ಎಂಬ ಮಾತುಗಳನ್ನು ಸಹ ಪ್ರಯಾಣಿಕರು ಹೇಳುತ್ತಿದ್ದರು ಎಂದು ಶ್ರೀನಿವಾಸಪುರದ ಪ್ರಯಾಣಿಕ ಸಿದ್ದೇಶ್ ಹಾಗು ಚಿಂತಾಮಣಿಯ ಮಂಜುನಾಥ್ ಹೇಳುತ್ತಾರೆ.ಬದಲಿ ವ್ಯವಸ್ಥೆ ಮಾಡದ ರೈಲ್ವೆ ಇಲಾಖೆರೈಲು ಕೆಟ್ಟು ನಿಂತಿದೆ ರೈಲಿನಲ್ಲಿ ಶಿಡ್ಲಘಟ್ಟ ಚಿಂತಾಮಣಿ ಹಾಗು ಶ್ರೀನಿವಾಸಪುರಕ್ಕೆ ಸೇರಿದ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರಯಾಣಿಕರು ಇದ್ದು ಅವರಿಗೆ ಬದಲಿ ಸಾರಿಗೆ…