Author: Srinivas_Murthy

ಸೋಮಯಾಜಲಹಳ್ಳಿ ಗ್ರಾಮ ದಶಕಗಳ ಹಿಂದೆ ರಾಜಕೀಯ ಕುರುಕ್ಷೇತ್ರವಾಗಿದ್ದು ಮಚ್ಚು ಕೊಡಲಿ ಕತ್ತಿ ದಾಳಿ ಪ್ರತಿ ದಾಳಿ ಕೊಲೆ ಸುಲಿಗೆ ದ್ವೇಷ ಪ್ರತಿಕಾರದ ರಕ್ತಚರಿತ್ರೆಯ ದಾಹಕ್ಕೆ ನರಳಿ ನರಳಿ ನಲುಗಿ ಹೋಗಿತ್ತು,ಹೊಸ ಪೀಳಿಗೆಯ ಒಡಾಟದ ಕಾಲಘಟ್ಟದಲ್ಲಿ ಇಲ್ಲಿನ ಜನ ಹಲವಾರು ವರ್ಷಗಳ ಕರಾಳ ಘಟನೆಗಳನ್ನು ಹಾಗು ಹಳೆಯ ಮುನಿಸನೆಲ್ಲ ಮರೆತು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದರು.ಬದುಕು ಕಟ್ಟಿಕೊಳ್ಳಲು ಮುಂದಾದ ಯುವ ಜನತೆ ಸಾಮಾಜಿಕವಾಗಿ ವ್ಯವಹಾರಿಕವಾಗಿ ಅಭಿವೃದ್ಧಿಯಾಗುತ್ತ ಸಾಗಿದ್ದರು ಆದರೆ ಸೋಮವಾರ ರಾತ್ರಿ ಹಣದ ವಿಚಾರದಲ್ಲಿ ನಡೆದ ಜಗಳದಲ್ಲಿ ಕೊಲೆಯೊಂದು ನಡೆದು ಇಲ್ಲಿನ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಂತಾಗಿದೆ ಈ ಬಗ್ಗೆ ಜಿಲ್ಲಾಡಳಿತ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಘಟನೆಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕಿದಾಗಷ್ಟೆ ಶಾಂತವಾದ ಸೋಮಯಾಜಲಹಳ್ಳಿ ಕಾಣಲು ಸಾಧ್ಯ….. ಶ್ರೀನಿವಾಸಪುರ:ಚಾಕು ಇರಿತದಿಂದ ನಡೆದ ಕೊಲೆಯಿಂದ ಸೋಮಯಾಜಲಹಳ್ಳಿ ಗ್ರಾಮ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ ಗ್ರಾಮದಲ್ಲಿ ಎಲ್ಲೆಲ್ಲೂ ಪೋಲಿಸರೆ ತುಂಬಿದ್ದಾರೆ ಗ್ರಾಮದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಏರ್ಪಟ್ಟಿದೆ.ಹಣದ ವಿಚಾರವಾಗಿ ಸೋಮಯಾಜಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ನ್ಯಾಯ…

Read More

ಶ್ರೀನಿವಾಸಪುರ:ಹಣದ ವಿಚಾರವಾಗಿ ಕರ್ನಾಟಕದ ಇಬ್ಬರು ಆಂಧ್ರದ ರಾಮಸಮುದ್ರಂನಲ್ಲಿ ಜಗಳ ಆಡಿಕೊಂಡಿದ್ದು ನಂತರ ಊರಿಗೆ ವಾಪಸ್ಸು ಆಗಿದ್ದಾರೆ ಸಂಜೆ ಗ್ರಾಮದ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಮಾಡುವ ಸಲುವಾಗಿ ಇಬ್ಬರು ಸೇರಿಕೊಂಡು ಜಗಳ ಆಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಚಾಕುವಿನಿಂದ ಇರಿಯಲಾಗಿದ್ದು ಒರ್ವ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇಂದು ಸೋಮವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡದಿರುತ್ತದೆ.ಮೃತನನ್ನು ಗುಂತವಾರಿಪಲ್ಲಿ ಮಂಜುನಾಥ್(32) ಎಂದು ಗುರತಿಸಲಾಗಿದೆ ಮೃತ ಮಂಜುನಾಥ್ ಹಾಗು ಕೂಳಗೂರ್ಕಿಯ ಶಿಮೂರ್ತಿ ಇಬ್ಬರು ಹಣಕಾಸು ವಿಚಾರವಾಗಿ ಆಂಧ್ರದ ರಾಮಸಮುದ್ರಂನಲ್ಲಿ ಇಂದು ಕಿತ್ತಾಡಿಕೊಂಡಿದ್ದಾರೆ ಇಬ್ಬರು ಊರಿಗೆ ವಾಪಸ್ಸು ಬಂದಿದ್ದಾರೆ ಮತೆ ತಡ ಸಂಜೆ ಇಬ್ಬರು ಸೋಮಯಾಜಲಹಳ್ಳಿ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಹೆಸರಿನಲ್ಲಿ ಸೇರಿದ್ದಾರೆ ಅಲ್ಲಿ ಮತ್ತೆ ಜಗಳ ಆಡಿಕೊಂಡಿದ್ದು ಪರಸ್ಪರ ತಳ್ಳಾಡಿಕೊಂಡಿದ್ದಾರೆ ಈ ಸಂದರ್ಬದಲ್ಲಿ ಶಿಮೂರ್ತಿ ಕೈಯಲ್ಲಿದ್ದ ಚಾಕುವಿನಿಂದ ಇರಿದಿದ್ದಾಗಿ ಹೇಳಲಾಗಿದ್ದು ಪೋಲಿಸರ ತನಿಖೆಯಲ್ಲಿ ಸತ್ಯಾಂಶ ಹೋರಬರಬೇಕಾಗಿದೆ.ಶಿವಮೂರ್ತಿ ಮನೆಗೆ ಬೆಂಕಿ ಹಚ್ಚಲು ಮುಂದಾದ…

Read More

ಶ್ರೀನಿವಾಸಪುರ:ಜಮೀನು ವಿವಾದ ಮುಂದಿಟ್ಟುಕೊಂಡು ಅವರ ಮನೆ ಬಳಿಯೆ ವಕೀಲರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಹೊರವಲಯದಲ್ಲಿನ ಹೆಚ್.ನಲ್ಲಪಲ್ಲಿಯಲ್ಲಿ ನಡೆದಿರುತ್ತದೆ ಹಲ್ಲೆಯಲ್ಲಿ ಗಾಯಗೊಂಡ ವಕೀಲ ಸೊಣ್ಣೇಗೌಡ ಎಂದು ಗುರತಿಸಲಾಗಿದೆ.ಬಾಯಲ್ಲಿ ರಕ್ತ ಬರುವಂತೆ ಗುಂಪುಕಟ್ಟಿಕೊಂಡು ಬಂದವರು ಕಲ್ಲು ದೊಣ್ಣೆಯಲ್ಲಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದು ತೀವ್ರವಾಗಿ ಗಾಯಗೊಂಡಂತ ವಕೀಲ ಸೊಣ್ಣೇಗೌಡ ಅವರು ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವಕೀಲರ ಸಂಘದಿಂದ ಕಲಾಪಕ್ಕೆ ಬಹಿಷ್ಕಾರವಕೀಲ ಸೊಣ್ಣೇಗೌಡರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ 24 ಗಂಟೆ ಕಳೆದರು ಹಲ್ಲೆ ಮಾಡಿದ ಆರೋಪಿಗಳನ್ನು ಶ್ರೀನಿವಾಸಪುರದ ಪೋಲಿಸರು ಬಂಧಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಶ್ರೀನಿವಾಸಪುರ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿದೆ.ವಕೀಲ ಸೊಣ್ಣೇಗೌಡರ ಮೇಲೆ ನಡೆದ ಹಲ್ಲೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀನಿವಾಸಪುರ ವಕೀಲರ ಸಂಘ ಪದಾಧಿಕಾರಿಗಳು ಇಂದು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿದ್ದಾರೆ

Read More

ನ್ಯೂಜ್ ಡೆಸ್ಕ್:ಕೋಲಾರದ ಪ್ರಭಾವಿ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್@ ಕೌನ್ಸಿಲರ್ ಶ್ರೀನಿವಾಸನ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಕರ್ನಾಟಕ ಹೈಕೋರ್ಟ್​ ಇಂದು (ಮಾರ್ಚ್ 17) ಆದೇಶಿಸಿದೆ.ಗೃಹ ಸಚಿವ ಜಿ ಪರಮೇಶ್ವರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು ಸ್ಥಳೀಯವಾಗಿ ಶ್ರೀನಿವಾಸಪುರದ ಮಾಜಿ ಶಾಸಕ ಹಾಗು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತರಾಗಿದ್ದ ಪ್ರಭಾವಿ ಮುಖಂಡ ಎಂ.ಶ್ರೀನಿವಾಸನ್ ಅವರನ್ನು 2023 ಅಕ್ಟೋಬರ್ 23ರಂದು ಶ್ರೀನಿವಾಸಪುರ ಪಟ್ಟಣದ ಹೊರವಲಯದ ಮುಳಬಾಗಿಲು ರಸ್ತೆಯಲ್ಲಿ ಹೊಗಳಗೆರೆ ಕ್ರಾಸ್ ಬಳಿ ಅವರದೆ ತೋಟದ ಹತ್ತಿರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದರು.ಈ ಸಂಬಂಧ ಶ್ರೀನಿವಾಸ್ ಅವರ ಪತ್ನಿ ಖ್ಯಾತ ವೈದ್ಯೆ ಡಾ. ಎಸ್. ಚಂದ್ರಕಲಾ ಅವರು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ನ್ಯಾಯ ಕೋರಿ ಹೈಕೋರ್ಟ್​ಗೆ ಮನವಿ ಮಾಡಿದ್ದರು. ಚಂದ್ರಕಲಾ ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ್ದಾರೆ.ಸ್ಥಳೀಯ ಪೊಲೀಸರು ಹಾಗೂ…

Read More

ಕೋಲಾರ ನನ್ನ ಜನ್ಮ ಭೂಮಿ, ಕಾಯಕ ಭೂಮಿ, ಕರ್ಮ ಭೂಮಿ ಇದರ ಋಣ ನನ್ನ ಮೇಲಿದೆ. ಈ ಋಣ ತೀರಿಸುವುಕ್ಕಾಗಿ ನಾನು ನನಗೆ ಸಿಕ್ಕ ಅವಕಾಶಗಳೆಲ್ಲವನ್ನೂ ಬಳಸಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾರ್ಮಿಕವಾಗಿ ನುಡಿದರು. ಕೋಲಾರ:ನನ್ನ ಬೇರುಗಳು ಕೋಲಾರದ ಮಣ್ಣಿನಲ್ಲಿದೆ ಈ ಮಣ್ಣಿನ ಋಣ ತೀರಿಸುವ ಪ್ರಯತ್ನದಲ್ಲಿ ಇದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭಾವನಾತ್ಮಕವಾಗಿ ಹೇಳಿದರು.ಅವರು ಭಾನುವಾರ ಸಂಜೆ ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅವರಣದಲ್ಲಿ ನಡೆದ ಸಮಾರಂಭದಲ್ಲಿ ಕೋಲಾರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸರ್ಕಾರದಿಂದ 25 ಲಕ್ಷ ರೂ ಅನುದಾನ ಒದಗಿಸಿದಕ್ಕಾಗಿ ಪತ್ರಕರ್ತರ ಸಂಘ ಮತ್ತು ನಾಗರಿಕ ಸಂಘಟನೆಗಳಿಂದ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ನನ್ನ ಹುಟ್ಟು, ಬಾಲ್ಯ ಎಲ್ಲಾ ಕೋಲಾರ ಮಣ್ಣಿನಲ್ಲಿ ಬೆರೆತಿದೆ. ನನ್ನ ಪತ್ರಿಕಾ ವೃತ್ತಿ ಬದುಕನ್ನು ಮಾತ್ರವಲ್ಲ, ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೂ ಕೋಲಾರದ ಬೀದಿಗಳು ನನಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬೆಳೆದಿದ್ದೇನೆ ಇದಕ್ಕೆ ಕಾರಣ ನನ್ನ ಬೇರುಗಳು ಕೋಲಾರದ…

Read More

ತೆಲಗು ನಟ ರವಿತೆಜ ರಾಜಮೌಳಿ ಕಾಂಬಿನೇಷನಲ್ ಬಂದಂತ ತೆಲುಗು ಸಿನಿಮಾ ವಿಕ್ರಮಾರ್ಕುಡು ಸಿನಿಮಾದಲ್ಲಿ ಖಳನಾಯಕನ ಮನೆಗೆ ಭದ್ರತೆಗೆ ಬಂದಂತ ಅಧಿಕಾರಿಯನ್ನು ತನ್ನ ಮಗನೊಂದಿಗೆ ನೃತ್ಯಮಾಡಲು ಖಳನಾಯಕ ಆದೇಶಿಸುತ್ತಾನೆ ಇದಕ್ಕೆ ಮಂತ್ರಿ ವೇಷಧಾರಿ ಜಯಪ್ರಕಾಶ್ ಸಹ ಹುಕುಮ್ ಸೂಚಿಸಿದ್ದು ಅಂತಹುದೆ ಘಟನೆ ಬಿಹಾರದ ಪಾಟ್ನಾದಲ್ಲಿ ಪ್ರತಿಷ್ಟಿತ ರಾಜಕಾರಣಿ ಮನೆಯಲ್ಲಿ ನಡೆದಿದೆ.ವಿಕ್ರಮಾರ್ಕುಡು ಸಿನಿಮಾದಲ್ಲಿ ಮಗನೊಂದಿಗೆ ಖಳನಾಯಕ ನೃತ್ಯ ಮಾಡಲು ಹೇಳಿದರೆ ಬಿಹಾರದ ರಾಜಕಾರಣಿ ತನಗೆ ಭದ್ರತೆ ಒದಗಿಸಲು ಬಂದಂತ ಪೋಲಿಸ್ ಅಧಿಕಾರಿಯನ್ನು ನೃತ್ಯಮಾಡಲು ಹೇಳಿರುವಂತ ವಿಡಿಯೋ ವೈರಲ್ ಆಗಿದೆ. ನ್ಯೂಜ್ ಡೆಸ್ಕ್:ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರ ಮಗ ತೇಜ್ ಪ್ರತಾಪ್ ಯಾದವ್ ಶನಿವಾರ ಪಾಟ್ನಾದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹೋಳಿ ಆಚರಿಸಿದರು. ಈ ಕಾರ್ಯಕ್ರಮದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಯಾದವ್ ಅವರು ಸಮಾರಂಭದ ಸಮಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನೃತ್ಯ ಮಾಡಲು ಸೂಚಿಸುತ್ತಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ,ಶ್ರೀಯಾದವ್…

Read More

ನೂಜ್ ಡೆಸ್ಕ್:ಎಣ್ಣೆ ಹೊಡೆದವರು ಯಾವುದೆ ಸಾಹಸ ಮಾಡಲು ಹಿಂಜರಿಯುವುದಿಲ್ಲ ತಮಗೆ ತಾವೆ ಮಹಾರಾಜರಂತೆ ವರ್ತಿಸುತ್ತಾರೆ ತೆಲಗು ಸಿನಿಮಾ ಗಬ್ಬರ್ ಸಿಂಗ್ ನ ಹಾಡು “ಮಂದು ಬಾಬುಲಮ್ ಮೆಮು ಮಂದು ಬಾಬುಲಯ್ ಮಂದು ಕೊಡಿತೆ ಮಾಕು ಮೇಮೆ ಮಹಾರಾಜುಲಮ್” ಎನ್ನುವಂತೆ ಮದ್ಯ ಕುಡಿದವರ ವರ್ತನೆಗಳನ್ನು ಡೈಲಾಗ್ ಬಗ್ಗೆ ಹೇಳುತ್ತ ಹೋದರೆ ದಿನ ಸಾಲದು ತಮಗೆ ಇಷ್ಟ ಬಂದಂತೆ ವರ್ತಿಸುತ್ತಾರೆ ಇವರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಲೆಕ್ಕವಿಲ್ಲದಷ್ಟು ವೀಡಿಯೊಗಳಿವೆ. ಇಷ್ಟೆಲ್ಲ ಯಾಕೆ ಪ್ರಸ್ತಾವನೆ ಅಂದರೆ ಇತ್ತೀಚೆಗೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿ ಕುಡುಕನೊಬ್ಬ ಘೋರ ಪ್ರಮಾದ ಮಾಡಿದ್ದಾನೆ ಸದ್ಯ ಯಾವುದೆ ಸಾವು ನೋವು ಆಗಿಲ್ಲ.ಎಣ್ಣೆ ಹೊಡೆದ ವ್ಯಕ್ತಿಯೊಬ್ಬ ಒಬ್ಬಂಟಿಯಾಗಿ ಬಸ್ ನಿಲ್ದಾಣಕ್ಕೆ ಹೋಗಿ ಕೊತ್ತಚರವು-ಹಿಂದೂಪುರ ಬಸ್ ಹತ್ತಲು ಬಂದಿದ್ದಾನೆ ನಂತರ ಬಸ್ ಕೆಳಗೆ ಹೋಗಿ ಸ್ಟಪನಿ ಟೈರ್ ಹಿಡಿದುಕೊಂಡು ಜೋತಾಡುತ್ತ ಇದ್ದಾನೆ ಬಸ್ ಚಲಿಸಿದೆ ಅದೂ ಕೂಡ ಒಂದು ಎರಡು ಕಿಲೋಮೀಟರ್ ಅಲ್ಲ.ಸುಮಾರು 15 ಕಿಲೋಮೀಟರ್ ಬಸ್ ಚಲಿಸಿದೆ ಬಸ್ ಚಲಿಸುತ್ತಿದ್ದರೆ ಬಸ್ ಹಿಂದೆ…

Read More

ಶ್ರೀನಿವಾಸಪುರ:ಪ್ರಪಂಚ ಪ್ರಸಿದ್ಧ ಮಾವಿನ ನಗರ ಶ್ರೀನಿವಾಸಪುರದ ಪ್ರಸಿದ್ಧ ಶ್ರೀ ವರದ ಬಾಲಂಜನೇಯ ಬ್ರಹ್ಮ ರಥೋತ್ಸವ ಇಂದು ಸಂಭ್ರಮ ಸಡಗರದಿಂದ ನಡೆಯಿತು.ಪ್ರತಿವರ್ಷದಂತೆ ಫಾಲ್ಗುಣ ಮಾಸದ ಕಾಮನ ಹುಣ್ಣಿಮೆಯಂದು ಶ್ರೀ ಅಂಜನೇಯ ಸಮೇತ ಶ್ರೀರಾಮ ಸಿತಾದೇವಿ ಲಕ್ಷ್ಮಣ ದೇವರ ಉತ್ಸವ ಮೂರ್ತಿಗಳನ್ನು ಹೊತ್ತ ರಥ ಶ್ರೀ ವರದ ಬಾಲಂಜನೇಯ ಕ್ಷೇತ್ರದಲ್ಲಿ ಚಲಿಸುತ್ತಿದ್ದರೆ ನೆರೆದಿದ್ದ ಜನೊಸ್ತಮದ ಹರ್ಷೋದ್ಗಾರಗಳ ನಡುವೆ ತಮ್ಮ ಕೋರಿಕೆಗಳನ್ನು ಈಡೆರಿಸುವಂತೆ ದವಣ ಕುಚ್ಚಿದ ಬಾಳೆಹಣ್ಣನ್ನು ರಥದ ಮೇಲೆ ಎಸೆದು ಕೃತಾರ್ಥರಾದರು. ಶ್ರೀ ವರದ ಬಾಲಾಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಎಂಟು ದಿನಗಳ ಕಾಲ ಜಾತ್ರ ಉತ್ಸವಗಳು ನಡೆಯುತ್ತದೆ ದಿನಾಂಕ 12ರಂದು ಬುಧವಾರದಿಂದ ಅಂಕುರಾರ್ಪಣೆಯ ಧ್ವಜಾರೋಹಣದೊಂದಿಗೆ ಅರಂಭವಾಗಿದ್ದು 13 ರಂದು ಗುರುವಾರ ಸಂಜೆ ಶೇಷವಾಹನೋತ್ಸವ ಸೇವೆ ರಾತ್ರಿ 7 ಗಂಟೆ ಸಮಯದಲ್ಲಿ ಸಿತಾರಾಮರ ಕಲ್ಯಾಣೋತ್ಸವ ನಡೆಯಿತು ಇಂದು 14 ಶುಕ್ರವಾರ ಹಗಲು ಬ್ರಹ್ಮ ರಥೋತ್ಸವ ನಡೆಯಿತು ಸಂಜೆ ಧೋಳೂತ್ಸವ ರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು 15 ರಂದು ಶನಿವಾರ ಹಂಸವಾಹನೋತ್ಸವ ನಡೆಯಲಿದೆ ರಾತ್ರಿ…

Read More

ಕೋಲಾರ:ಗೌಜು ಗದ್ದಲ ಕೋಲಾಹಲದ ನಡುವೆ ನಡೆದ ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಕೋಮುಲ್) ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೂಟದ ಮತಕ್ಷೇತ್ರ ವಿಂಗಡಣೆ ಸರಿಯಾಗಿದೆ ಎಂಬುದಕ್ಕೆ ಅನುಮೋದನೆ ದೊರಕಿದೆ.ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ಕ್ಷೇತ್ರ ನಿಗದಿಪಡಿಸಲು ಹೈಕೋರ್ಟ್ ನೀಡಿದ ಸೂಚನೆಯಂತೆ, ಜಿಲ್ಲಾ ಹಾಲು ಒಕ್ಕೂಟದ ಆಡಳಿತಾಧಿಕಾರಿ ಅಸಿಸ್ಟಂಟ್ ಕಮೀಷನರ್ ಡಾ.ಮೈತ್ರಿ ಅಧ್ಯಕ್ಷತೆಯಲ್ಲಿ ಕೋಲಾರ ನಗರದ ಹೊರವಲಯದಲ್ಲಿರುವ ರತ್ನ ಕನ್ವೆನಷನ್ ಸೇಂಟರ್ ನಲ್ಲಿ ಸರ್ವ ಸದಸ್ಯರ ವಿಶೇಷ ಸಭೆಯನ್ನು ಗುರುವಾರ ಕರೆಯಲಾಗಿತ್ತು ಮೊದಲಿಗೆ ಮತ ಕ್ಷೇತ್ರ ವಿಂಗಡಣೆಗೆ ಅನುಮೋದನೆ ನೀಡುವಂತೆ ಸೂಚಿಸಲಾಯಿತು. ಈ ವಿಚಾರದ ಪರವಾಗಿದ್ದ ಪ್ರತಿನಿಧಿಗಳು ಕೈ ಎತ್ತುವ ಮೂಲಕ ಅನುಮೋದನೆಗೆ ಬೆಂಬಲ ಸೂಚಿಸಿದರು. ಆದರಂತೆ ಅನುಮೋದನೆ ಸಿಕ್ಕಿದೆ ಎಂದು ಆಡಳಿತಾಧಿಕಾರಿ ಘೋಷಿಸಿ ಸಭೆ ಮುಕ್ತಾಯಗೊಳಿಸಿದರು.ರೊಚಿಗೆದ್ದ ಬಂಗಾರಪೇಟೆ ಶಾಸಕಜಿಲ್ಲಾ ಹಾಲು ಒಕ್ಕೂಟದ ಮತಕ್ಷೇತ್ರ ವಿಂಗಡಣೆಯನ್ನು ಮೊದಲಿನಿಂದಲೂ ಪ್ರಭಲವಾಗಿ ವಿರೋಧಿಸುತ್ತಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ,ಈ ವಿಚಾರವಾಗಿ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು ಇದಕ್ಕೆ…

Read More

ಇತ್ತಿಚಿಗೆ ಬೆಂಗಳೂರು-ಕಡಪ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತ ಪ್ರಕರಣಗಳು ಹೆಚ್ಚುತ್ತಿದೆ ಕಾರು ಹಾಗು ಬೈಕ್ ಸವಾರರು ಸೇರಿದಂತೆ ವಿವಿಧ ಬಗೆಯಲ್ಲಿ ಅಪಘಾತಕ್ಕೀಡಾಗಿ ಕೈಕಾಲುಗಳನ್ನು ಕಳೆದುಕೊಂಡರೆ, ಮತ್ತೆ ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ.ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಕೆಲವರು ಸಾವಿನ ಮನೆಯ ಕದ ತಟ್ಟಿದ್ದಾರೆ ಇನ್ನು ಕೆಲವರು ಜೀವ ತೆತ್ತಿದ್ದಾರೆ.ಹೆಚ್ಚುತ್ತಿರುವ ಅಪಘಾತಗಳಿಂದ ಈ ರಸ್ತೆಯಲ್ಲಿ ಒಡಾಡುವಂತಹ ಜನ ಓಡಾಡಲು ಭಯ ಬೀಳುತ್ತಿದ್ದಾರೆ.ಅಪಘಾತಗಳಿಗೆ ಮುಖ್ಯ ಕಾರಣ ಅತಿ ವೇಗದ ವಾಹನ ಚಾಲನೆ ಎನ್ನುತ್ತಾರೆ ಸ್ಥಳೀಯರು. ಶ್ರೀನಿವಾಸಪುರ:ಖಾಸಗಿ ಬಸ್ಸುಗಳು ಓವರ್ ಟೆಕ್ ಮಾಡುವ ದಾವಂತದಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಒರ್ವ ಪ್ರಯಾಣಿಕ ಮೃತಪಟ್ಟಿರುವ ಘಟನೆ ಬೆಂಗಳೂರು-ಕಡಪ ಹೆದ್ದಾರಿಯಲ್ಲಿ ಗುಂಟಪಲ್ಲಿ॒@ಗಿಲ್ಜಗೂರ್ ಕ್ರಾಸ್ ಬಳಿ ಮಂಗಳವಾರ ಮದ್ಯಾರಾತ್ರಿ ನಡೆದಿರುತ್ತದೆ.ಬೆಂಗಳೂರು-ಪ್ರೊದ್ದಟೂರು ನಡುವೆ ಒಡಾಡುವ ಸುವರ್ಣಮುಖಿ ಬಸ್ ಹಾಗೂ ಎ.ಆರ್.ಟ್ರಾವೆಲ್ ಸ್ಲಿಪಿಂಗ್ ಬಸ್ಸುಗಳ್ ನಡುವೆ ಮುಖಾಮುಕಿ ಡಿಕ್ಕಿಯಾಗಿದ್ದು ಅಪಘಾತವಾದ ಘಟನೆಯಲ್ಲಿ ಬಸ್ ನಲ್ಲಿದ್ದ ಓರ್ವ ಸಾವನಪ್ಪಿದರೆ ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.ಮೃತ ಪ್ರಯಾಣಿಕನನ್ನು ಆಂದ್ರದ ಮದನಪಲ್ಲಿ ನಿವಾಸಿ ಗಂಗಾಧರ್…

Read More