Author: user_author

ಚಿಂತಾಮಣಿ:ಜಲ್ಲಿ ಕಲ್ಲು ತುಂಬಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿನ ಹೋಟೆಲ್‌ಗೆ ನುಗ್ಗಿದ ಪರಿಣಾಮ ಹೋಟೆಲ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಂತಾಮಣಿ ನಗರದ ಕೋಲಾರ ವೃತ್ತದಲ್ಲಿ ಗುರುವಾರ ನಡೆದಿರುತ್ತದೆ.ಮೃತರನ್ನು ಹೋಟೆಲ್ ಮಾಲಿಕ ಶಿವಾನಂದ(60) ಹಾಗು ಅಡುಗೆ ಭಟ್ಟ ಕುಮಾರ್‌(50) ಎಂದು ಗುರುತಿಸಲಾಗಿದ್ದುಘಟನೆ ಸಂದರ್ಭದಲ್ಲಿ ಹೋಟೆಲ್‌ನಲ್ಲಿದ್ದ ಗ್ರಾಹಕರು ಸೇರಿದಂತೆ ಇತರೆ ಕೆಲಸಗಾರರು ಅಪಾಯದಿಂದ ಪಾರಾಗಿದ್ದಾರೆಚಿಂತಾಮಣಿ ಕಡೆಯಿಂದ ಬಂದು ಕೋಲಾರ ಕಡೆಗೆ ತೆರಳಲು ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ವೇಗವಾಗಿ ಬಂದಿದ್ದು ಕೋಲಾರ ವೃತ್ತದಲ್ಲಿ ತಿರವು ತಗೆದುಕೊಳ್ಳಬೇಕಾಗಿದ್ದು ಚಾಲಕ ಅತಿವೇಗ ಮತ್ತು ಅಜಾಗ ರೂಕತೆಯಿಂದ ಚಾಲನೆಯಿಂದಾಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕೋಲಾರ ವೃತ್ತದಲ್ಲಿರುವ ಸೆಲ್ವಂ ಸರ್ವೀಸ್ ಸ್ಟೇಷನ್ ಪಕ್ಕದಲ್ಲಿರುವ ಶ್ರೀ ದರ್ಶಿನಿ ಫಾಸ್ಟ್ ಫುಡ್ ಹೋಟೆಲ್‌ಗೆ ನುಗ್ಗಿದೆ, ನುಗ್ಗಿದ ರಭಸಕ್ಕೆ ಹೋಟೆಲ್‌ನ ಕ್ಯಾಷ್ ಮೇಲೆ ಕುಳಿತ್ತಿದ್ದ ಮಾಲೀಕ ಮತ್ತು ಅಲ್ಲಿಯೇ ತರಕಾರಿ ಹಚ್ಚುತ್ತಿದ್ದ ಭಟ್ಟರಿಗೆ ಡಿಕ್ಕಿ ಹೊಡೆದ ಲಾರಿ ಜಲ್ಲಿ ಲೋಡ್ ಸಮೇತ ಪಕ್ಕಕ್ಕೆ ಉರಳಿ ಬಿದ್ದಿರುತ್ತದೆ…

Read More