ಶ್ರೀನಿವಾಸಪುರ:ಹಳ್ಳ ಕೊಳ್ಳಗಳಿಂದ ಕೂಡಿ ಹಾಳಾದ ರಸ್ತೆಗೆ ಮಣ್ಣು ಹಾಕಿ ಹಳ್ಳ ಮುಚ್ಚಿ ಮೆಲ್ನೋಟಕ್ಕೆ ಮೇಕಪ್ ಮಾಡಿದರೆ ಸಾಕ ಅಧಿಕಾರಿಗಳೆ ಹಿಗೇಂದು ಈ ರಸ್ತೆಯಲ್ಲಿ ಓಡಾಡುವ ದ್ವೀಚಕ್ರ ವಾಹನ ಸವಾರರ ಮಾತು.
ಈ ರಸ್ತೆ ಗ್ರಾಮವೊಂದರ ರಸ್ತೆಯಲ್ಲ ಬದಲಾಗಿ ಶ್ರೀನಿವಾಸಪುರ ತಾಲೂಕಿನ ಗಡಿಯಂಚಿನ ಆಂಧ್ರದ ಚಂಬಕೂರು,ರಾಮಸಮುದ್ರಂ ಮದನಪಲ್ಲಿ ಭಾಗಕ್ಕೆ ಹೊಂದಿಕೊಂಡಿರುವ ತಾಲೂಕಿನ ಸೋಮಯಾಜಲಹಳ್ಳಿ,ಪುಲಗೂರಕೋಟೆ ಲಕ್ಷ್ಮೀಪುರ ಭಾಗದ ಜನತೆ ಶ್ರೀನಿವಾಸಪುರ ಪಟ್ಟಣಕ್ಕೆ ಬರಲು ಈ ರಸ್ತೆಯನ್ನು ಬಳಸುತ್ತಾರೆ ಈಗ ರಸ್ತೆ ಹಳ್ಳಬಿದ್ದು ಹಾಳಾಗಿದೆ ಗುಂಡಿಗಳಿಂದ ತುಂಬಿದ್ದು ತಿರುವುಗಳಲ್ಲಿ ದ್ವಿಚಕ್ರವಾಹನ ಸವಾರ ಅನಾಮತ್ತು ಕೆಳಗೆ ಬೀಳುವಷ್ಟು ಡಾಂಬರು ಕಿತ್ತುಹೋಗಿದೆ.
ನನಬಾರ್ಡ್ ಯೋಜನೆಯಲ್ಲಿ ನಿರ್ಮಾಣ ಗ್ರಾಮೀಣ ಸಂಪರ್ಕ ರಸ್ತೆಯನ್ನು ಹಿಂದಿನ ಶಾಸಕರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ಇಲಾಖೆ ನಿರ್ಮಿಸಿದ್ದು ಈಗ ರಸ್ತೆ ಹಾಳಾಗಿದೆ, ಗ್ರಾಮೀಣ ರಸ್ತೆಯಲ್ಲಿ ಸೋಮಯಾಜಲಹಳ್ಳಿ ಭಾಗದ ಜಲ್ಲಿಕ್ರಷರ್ ನಿಂದ ಬರುವಂತ ಟಿಪ್ಪರ್ ಲಾರಿಗಳು,ಮರಳು ಟ್ರಾಕ್ಟರಗಳು ಓಡಾಡುವ ಪರಿಣಾಮ ಸಂಪೂರ್ಣವಾಗಿ ಹಾಳಾಗಿದೆ ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗದ್ದೆಯಂತಾಗುತ್ತದೆ ಒಣಗಿದೆ ಮೇಲೆ ಮಣ್ಣಿನ ದೂಳು ದ್ವಿಚಕ್ರ ವಾಹನ ಸವಾರರ ಮುಖಕ್ಕೆ ಬಡಿಯುತ್ತದೆ.ರಸ್ತೆಯ ಬದಿಯ ಮುಳ್ಳುಗಂಟಿಗಳು ರಸ್ತೆ ವರಿಗೂ ಬೆಳೆದು ಬಂದಿವೆ,ರಾತ್ರಿ ವೇಳೆ ಒಡಾಡುವ ದ್ವಿಚಕ್ರ ವಾಹನ ಸವಾರರಿಗೆ ಮುಳ್ಳುಗಂಟಿಗಳಲ್ಲಿ ಅಡಗಿರುವ ಮುಳ್ಳಹಂದಿ, ಮೊಲ,ಕಾಡು ಬೆಕ್ಕುಗಳುವಾಹನದ ಬೆಳಕು ಕಂಡ ತಕ್ಷಣ ಅವು ಗಲಿಬಿಲಿಯಿಂದ ರಸ್ತೆ ದಾಟಿದರೆ ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡುತ್ತದೆ ಎನ್ನುವುದು ಇಲ್ಲಿ ಒಡಾಡುವಂತವರ ಅಳಲು. ಈ ರಸ್ತೆಗೆ ಮಣ್ಣು ಹಾಕುವುದು ತೇಪೆ ಹಾಕುವಂತ ಮೇಕಪ್ ಕಾರ್ಯ ಬೇಕಿಲ್ಲ ಅರ್ಜೆಂಟ್ ಆಗಿ ಸಂಪೂರ್ಣವಗಿ ಡಾಂಬರಿಕರಣ ಆಗಬೇಕು ಎನ್ನುವುದು ಅವಲಕುಪ್ಪ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Breaking News
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
Saturday, April 19