ಶ್ರೀನಿವಾಸಪುರ:-ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಕ್ಷರಶಃ ಉಗ್ರ ಸ್ವರೂಪಿಯಾಗಿ ಕಂದಾಯ ಇಲಾಖೆ ನೌಕರರನ್ನು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ಅವಾಚ್ಯ ಶಬ್ದಗಳಿಂದ ಜಾಡಿಸಿದ್ದಾರೆ.
ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ರಮೇಶ್ ಕುಮಾರ್,ತಹಶೀಲ್ದಾರ್ ಶ್ರೀನಿವಾಸ್ ಹಾಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸಮ್ಮುಖದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕುರಿತಾಗಿ ಚರ್ಚಿಸಲು ಸಹಕಾರ ಸಂಘಗಳ ಕಾರ್ಯದರ್ಶಿಗಳ ಜೊತೆಗಿನ ಸಭೆಯಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆಯಲು ರೆವೆನ್ಯೂ ದಾಖಲೆಗಳನ್ನು ನೀಡಬೇಕಾದ ಅವಶ್ಯಕತೆ ಇರುತ್ತದೆ ದಾಖಲೆಗೆ ತಹಶೀಲ್ದಾರ್ ಕಚೇರಿಯಲ್ಲಿ ನಿರ್ಧಿಷ್ಟ ದಾಖಲೆ ನೀಡಲು ಕಂದಾಯ ಇಲಾಖೆ ನೌಕರರು ತಿಂಗಳಾನುಗಟ್ಟಲೆ ಕಾಯಿಸುತ್ತಾರೆ ಮತ್ತೆ ಅಧಿಕಾರಿಗಳು ದಾಖಲೆ ನೀಡಲು ಸತಾಯಿಸುತ್ತಾರೆ ಎನ್ನುವ ಆರೋಪಕ್ಕೆ ಮಾಜಿಸ್ಪೀಕರ್ ಸಭೆಯಲ್ಲಿಯೇ ರೌದ್ರಾವತಾರ ತಾಳಿಯೇ ಬಿಟ್ಟಿದ್ದಾರೆ. ನೇರವಾಗಿ ಕಂದಾಯ ಇಲಾಖೆ ನೌಕರರ ವಿರಿದ್ದ ತಮ್ಮ ಬಾಯಿ ಹರಿಬಿಟ್ಟಿದ್ದಾರೆ ಬೈಗುಳದ ಸರಮಾಲೆಯನ್ನೇ ಹೊರಹಾಕಿದ್ದಾರೆ, ರೈತನ ಕಷ್ಟಕ್ಕೆ ಆಗದಿದ್ದರೆ ಅವರಿಗೆ ಮನುಷ್ಯತ್ವನೆ ಇಲ್ವಾ ಎಂದು ಏರು ಧನಿಯಲ್ಲಿ ಕೂಗಾಡಿ ಕಂದಾಯ ಇಲಾಖೆಯವರ ಜನ್ಮ ಜಾಲಾಡಿದ್ದಾರೆ, ನೀವು ದಾಖಲೆ ಕೊಡುವುದೇ ಲೇಟು ಇನ್ನೂ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಇನ್ನೂ ತಡಮಾಡ್ತಾರೆ ಎಂದವರೆ ಅಲ್ಲಿದ್ದ ತಹಶೀಲ್ದಾರ್ ಶ್ರೀನಿವಾಸ್ ಅವರನ್ನು ತರಾಟೆಗೆ ತಗೆದುಕೊಂಡು ನಾವು ನಿಮಗೆ ಗೌರವ ನೀಡುವುದು ನೀವು ನಮಗೆ ಗೌರವ ನೀಡುವುದು ಸಾರ್ವಜನಿಕವಾಗಿ ಕೆಲಸ ಕಾರ್ಯ ಆಗಲು ಸಹಕಾರಿಯಾಗುವುದಿಲ್ಲ, ನಿಮ್ಮ ಇಲಾಖೆಯಲ್ಲಿ ಕೆಲವೊಬ್ಬ ನೌಕರರು ದಾಖಲೆಗಳನ್ನು ಎತ್ತಿ ಇಡುವುದು ಕಚೇರಿಗೆ ರಜಾ ಹಾಕುವುದು ಇಂತ ಬೇಜವಾಬ್ದಾರಿ ನಿರ್ಲಕ್ಷ್ಯ ವಹಿಸುವಂತವರಿಗೆ ರೈತರನ್ನು ಕರೆ ತಂದು ಸೀಮೆ ಎಣ್ಣೆ ಸುರಿದು ಸುಟ್ಟುಹಾಕಿಸುತ್ತೇನೆ ರಾಜ್ಯದಲ್ಲಿ ಸಂಘರ್ಷವೇ ನಡೆದುಹೋಗಲಿ, ಜನರು ಒಳ್ಳೆಯದನ್ನು ತೀರ್ಮಾನಿಸಿ ಗೌರವಿಸುತ್ತಾರೆ. ಕೆಲಸ ಮಾಡದ ನೌಕರ ಇದ್ದರೆಷ್ಟು ಹೋದರೆಷ್ಟು ಅಂತವರಿಗೆ ಬಾರಿಸಲು ಶುರು ಮಾಡಬೇಕು ಎಂದು ಕೂಗಾಡಿದ್ದಾರೆ ಸಭೆಯಲ್ಲಿದ್ದವರು ಶಾಸಕರ ಉಗ್ರಸ್ವರೂಪವನ್ನು ಕಂಡು ತಣ್ಣಾಗಾಗಿ ಹೋಗಿದ್ದಾರೆ.
ರಕ್ತ ಕುಡಿಯುವ ಇತರೆ ಬ್ಯಾಂಕುಗಳು
ಮಾರ್ವಾಡಿಗಳ ರಿತಿಯಲ್ಲಿ ನಮ್ಮ ರೈತರ ರಕ್ತ ಕುಡಿದು ಬಿಟ್ಟಿದ್ದಾರೆ ಎಂದು ಕಮರ್ಷಿಯಲ್ ಬ್ಯಾಂಕುಗಳ ವಿರುದ್ದವೂ ಸಿಟ್ಟು ಹೊರಹಾಕಿದರು.
ರಮೇಶ್ ಕುಮಾರ್ ಕಂದಾಯ ಅಧಿಕಾರಿಗಳನ್ನು ಬೈಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿ :-ಹರ್ಷವರ್ಧನ್