ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಡು ಜಿಂಕೆಯೊಂದು ಮೃತಪಟ್ಟಿದೆ. ಬಾರಿ ಗಾತ್ರದ ಜಿಂಕೆಯೊಂದು ರಸ್ತೆ ದಾಟುವಾಗ ಚಿಂತಾಮಣಿ ಕಡೆ ಹೊರಟಿದ್ದ ಕಾರಿನ ಮೇಲೆ ಬಿದ್ದು ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟಿದೆ. ತಿರುಪತಿ ದರುಶನ ಮುಗಿಸಿ ಚಿಕ್ಕಬಳ್ಳಾಪುರದ ಕಡೆ ಹೋರಟಿದ್ದ ಕಾರು ಕಲ್ಲೂರು ಅರಣ್ಯ ಇಲಾಖೆ ಸಸ್ಯ ಕ್ಷೇತ್ರದ ಬಳಿ ಹೋಗುತ್ತಿದ್ದಾಗ ವಾಹನದ ಮೇಲೆ ಬಾರಿ ಗಾತ್ರದ ವಸ್ತು ಬಿದ್ದಂತಾಗಿ ಕಾರು ನಿಯಂತ್ರಣ ತಪ್ಪಿದಂತಾಯಿತು ತಕ್ಷಣ ಕಾರು ನಿಲ್ಲಿಸಿ ನೋಡಿದಾಗ ರಸ್ತೆ ಬದಿ ಜಿಂಕೆ ಸತ್ತುಬಿದ್ದಿದೆ ಎಂದು ಕಾರು ಚಾಲಕ ಚಿರಂಜಿವಿ ಹೇಳುತ್ತಾರೆ.
ಕಾರು ಹಾಗು ಜಿಂಕೆ ಶವ ವಶಕ್ಕೆ ಪಡೆದ ಅರಣ್ಯ ಇಲಾಖೆ
ಸಾರ್ವಜನಿಕರು ಅಪಘಾತ ಸುದ್ಧಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಅರಣ್ಯ ರಕ್ಷಕ ಅನಿಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೆಲಧಿಕಾರಿಗಳ ಸೂಚನೆಯಂತೆ ಕಾರನ್ನು ವಶಕ್ಕೆ ಪಡೆದು,ಜಿಂಕೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಗೆದುಕೊಂಡು ಹೋದರು.ಅರಣ್ಯ ಅಧಿಕಾರಿಗಳು ಹೇಳುವಂತೆ ಕಲ್ಲೂರು ಅರಣ್ಯದಲ್ಲಿ ಜಿಂಕೆಗಳು ದೊಡ್ಡ ಸಂಖ್ಯೆಯಲ್ಲಿದ್ದು ಮಳೆ ಹಿನ್ನಲೆಯಲ್ಲಿ ರಸ್ತೆ ದಾಟಲು ಅರಣ್ಯದಿಂದ ಹೊರಗೆ ಬಂದಿರಬಹುದು ಎಂದು ಶಂಕಿಸಿದ್ದಾರೆ.
Breaking News
- ಶ್ರೀನಿವಾಸಪುರದಲ್ಲಿ ಆಟೋಚಾಲಕರ ಪ್ರತಿಭಟನೆ
- 10 ಮತ್ತು 20 ರೂ. ನಾಣ್ಯಗಳನ್ನು ನಿರಾಕರಿಸಿದರೆ ಜೈಲು!
- ಶ್ರೀನಿವಾಸಪುರ ಹೈವೇ ರಸ್ತೆಯಲಿ ಸಂತೆ ವ್ಯಾಪಾರ!
- ಶ್ರೀನಿವಾಸಪುರದಲ್ಲಿ ಅದ್ದೂರಿ ಕೆಂಪೇಗೌಡ ಜಯಂತಿ
- ಕೋಲಾರದ ಸರ್ಕಾರಿ ಕಛೇರಿಗಳಲ್ಲಿ ಭರ್ಜರಿ ಬಾಡೂಟ ಬರ್ತಡೇ ಪಾರ್ಟಿ!
- ಲಿಂಗದ ರೂಪದಲ್ಲಿ ಭಕ್ತರ ಕೋರಿಕೆ ಈಡೇರಿಸುತ್ತಿರುವ ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ
- ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವು ಮಾರುಕಟ್ಟೆ ಕರ್ಮ ಕಾಂಡ!
- ಕೋವಿಡ್ ನಂತರದ ಹೃದಯಾಘಾತಕ್ಕೆ ಕೊರೊನಾ ಲಸಿಕೆ ನಿಶ್ಚಿತ ಕಾರಣವಲ್ಲ ತಜ್ಞರ ಅಭಿಪ್ರಾಯ
- ಶಪಥ ಈಡೇರಿಸಿಕೊಂಡು ಆಂಧ್ರ ಅಸೆಂಬ್ಲಿಗೆ ಕಾಲಿಟ್ಟ ಮುಖ್ಯಮಂತ್ರಿ ಚಂದ್ರಬಾಬು
- HMT ಗೆ ಪುನರ್ ವೈಭವ ತರುತ್ತಾರ ಕುಮಾರಸ್ವಾಮಿ?
Saturday, July 6