ಕೋಲಾರ:ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆ, ಯುಕವರಿಗೆ ಉದ್ಯೋಗ ಸೃಷ್ಟಿಸಿ ಕುರಿತಂತೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಮೊದಲ ಆಧ್ಯತೆಯನ್ನು ನೀಡುವುದಾಗಿ ಸಂಸದ ಮಲ್ಲೇಶ್ಬಾಬು ಹೇಳಿದರು.
ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಅವರು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರ ಜನತೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಗೌರ್ಹಾನಿತವಾಗಿ ನಿಭಾಯಿಸುತ್ತೇನೆ 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವವನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದರೆ ಅವರ ಜೊತೆ ಇದ್ದು ಅವರ ಕಾರ್ಯಶೈಲಿಯಂತೆ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸುವುದಾಗಿ ತಿಳಿಸಿದರು.
ಕುಮಾರಸ್ವಾಮಿಯವರಿಗೆ ಯಾವ ಖಾತೆ ನೀಡುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡ್ ಹಾಗೂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ನೀರಾವರಿ ಯೋಜನೆಗಳು ಅನುಷ್ಠನಗೊಳಿಸಲು ಸೂಕ್ತವಾದ ಸಚಿವ ಸ್ಥಾನ ನೀಡಿದರೆ ಉತ್ತಮ ಎಂದು ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ಬಿಜೆಪಿ ಸಂಸದರಾಗಿದ್ದ ಎಸ್ ಮುನಸ್ವಾಮಿ ಅವರು ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಸಮಯದ ಅಭಾವದಿಂದ ಕೆಲವು ಪೂರ್ಣಗೊಂಡಿಲ್ಲ ಅವರು ಕೈಗೆತ್ತಿಗೊಂಡಿರುವ ಅಭಿವೃದ್ದಿ ಯೋಜನೆಗಳನ್ನು ಪೂರೈಸಲು ಪ್ರಾಮಾಣಿ ಪ್ರಯತ್ನವನ್ನು ಮಾಡುತ್ತೇನೆ, ನೀರಾವರಿ ಯೋಜನೆ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎನ್ನುವುದು ನನ್ನ ಮೊದಲ ಆಧ್ಯತೆ ಎಂದು ವಿವರಿಸಿದರು.
ಬಂಗಾರಪೇಟೆ ಹಾಗೂ ಕೆಜಿಎಫ್ ಭಾಗದಿಂದ ಪ್ರತಿನಿತ್ಯ 30 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರು ಉದ್ಯೋಗ ಆರಿಸಿ ಬೆಂಗಳೂರಿಗೆ ಹೋಗಿಬರುತ್ತಿದ್ದಾರೆ ಅದನ್ನು ತಪ್ಪಿಸಲು ಬಿಜಿಎಲ್ ಪ್ರದೇಶದಲ್ಲಿ ಉತ್ದಾದನಾ ಘಟಕ ಸ್ಥಾಪನೆಯಾಗಬೇಕು, ಕೋಲಾರ ಗಡಿಯಾದ ವಿ.ಕೋಟ ಪಲಮನೇರು ಭಾಗದಲ್ಲಿ ಹರಿಯುತ್ತಿರುವ ಕೃಷ್ಟ ನದಿ ನೀರನ್ನು ಕೋಲಾರಕ್ಕೆ ತರುವ ಬಗ್ಗೆ ಎನ್.ಡಿ.ಎ ಮೈತ್ರಿಯಲ್ಲಿ ಭಾಗವಾಗಿರುವ ಟಿಡಿಪಿ ಅವರ ಜೊತೆ ಮಾತನಾಡಲು ಒಳ್ಳೆಯ ಅವಕಾಶ ಲಭಿಸಿದೆ ಆಂದ್ರದ ಟಿಡಿಪಿ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ಕೃಷ್ಣಾ ನದಿ ನೀರನ್ನು ಕೋಲಾರಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿಗಳ ಮೇಲೆ ಒತ್ತಡ ಹಾಕಿ ಈ ಯೋಜನೆ ಜಾರಿಗೆ ತರಲು ರೂಪು ರೇಷೆ ಮಾಡಲಾಗುವುದು ಎಂದು ಭರವಸೆ ವ್ಯಕ್ತಪಡಿದರು.
ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಅವರಿಗೆಲ್ಲಾ ಚಿರರುಣಿಯಾಗಿರುತ್ತೇನೆ ಎಂದರು.
Breaking News
- ಶ್ರೀನಿವಾಸಪುರದಲ್ಲಿ ಜಮೀನು ವಿವಾದಕ್ಕೆ ಮಹಿಳೆ ಅತ್ಮಹತ್ಯೆ ಮಾಡಿಕೊಂಡರ?
- ಶ್ರೀನಿವಾಸಪುರದಲ್ಲಿ ಆಟೋಚಾಲಕರ ಪ್ರತಿಭಟನೆ
- 10 ಮತ್ತು 20 ರೂ. ನಾಣ್ಯಗಳನ್ನು ನಿರಾಕರಿಸಿದರೆ ಜೈಲು!
- ಶ್ರೀನಿವಾಸಪುರ ಹೈವೇ ರಸ್ತೆಯಲಿ ಸಂತೆ ವ್ಯಾಪಾರ!
- ಶ್ರೀನಿವಾಸಪುರದಲ್ಲಿ ಅದ್ದೂರಿ ಕೆಂಪೇಗೌಡ ಜಯಂತಿ
- ಕೋಲಾರದ ಸರ್ಕಾರಿ ಕಛೇರಿಗಳಲ್ಲಿ ಭರ್ಜರಿ ಬಾಡೂಟ ಬರ್ತಡೇ ಪಾರ್ಟಿ!
- ಲಿಂಗದ ರೂಪದಲ್ಲಿ ಭಕ್ತರ ಕೋರಿಕೆ ಈಡೇರಿಸುತ್ತಿರುವ ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ
- ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವು ಮಾರುಕಟ್ಟೆ ಕರ್ಮ ಕಾಂಡ!
- ಕೋವಿಡ್ ನಂತರದ ಹೃದಯಾಘಾತಕ್ಕೆ ಕೊರೊನಾ ಲಸಿಕೆ ನಿಶ್ಚಿತ ಕಾರಣವಲ್ಲ ತಜ್ಞರ ಅಭಿಪ್ರಾಯ
- ಶಪಥ ಈಡೇರಿಸಿಕೊಂಡು ಆಂಧ್ರ ಅಸೆಂಬ್ಲಿಗೆ ಕಾಲಿಟ್ಟ ಮುಖ್ಯಮಂತ್ರಿ ಚಂದ್ರಬಾಬು
Saturday, July 6