ನ್ಯೂಜ್ ಡೆಸ್ಕ್: ದುಷ್ಕರ್ಮಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಎಲ್ಲೆ ಮೀರುತ್ತ ಅರಾಜಕತೆ ಸೃಷ್ಟಿಸುತ್ತ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾರೆ ಹಾದಿ ತಪ್ಪಿದ ಯುವಕರು ಹಿಂಸಾತ್ಮಕವಾಗಿ ವರ್ತಿಸುತ್ತ ಸಣ್ಣ ಪುಟ್ಟ ಕಾರಣಗಳಿಗೆ ರೌಡಿಸಂ ಮಾಡುವಷ್ಟು ಮುಂದಾಗಿದ್ದು ಅಮಾಯಕರ ಮೇಲೆ ಹಲ್ಲೆ ನಡೆಸುತ್ತ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ, ಅಸಹಾಯಕರನ್ನು ಹೊಡೆಯುವುದೇ ಹೀರೋಯಿಸಂ ಅಂತ ಕೆಲವರು ಭಾವಿಸಿಕೊಂಡಿದ್ದಾರೆ.
ಮೊನ್ನೆ ಬೆಂಗಳೂರಿನ ಕುಂದಲಹಳ್ಳಿ ಘಟನೆಯಲ್ಲಿ ಯುವಕರು ನಡೆಸುತ್ತಿದ್ದ ಬೇಕರಿ ಮೇಲಿನ ದಾಳಿ ನಡೆಸಿದ ಪುಂಡರು ಬೇಕರಿಯಲ್ಲಿನ ಯುವಕರನ್ನು ಹೊಡೆದು ಅಂದರ್ ಆಗಿದ್ದಾರೆ ಅಂತಹುದೆ ಘಟನೆಯೊಂದು ಡಿಸೆಂಬರ್ 30 ರಂದು ಗುರುವಾರ ತೆಲಂಗಾಣದ ಹನ್ಮಕೊಂಡದ ನಯೀಮ್ ನಗರದಲ್ಲಿ ನಡೆದಿದೆ.
ತಡಸಂಜೆ ಬಾಗಿಲು ಹಾಕುವ ಸಮಯದಲ್ಲಿ ಇಬ್ಬರು ಯುವಕರು ರಿಯಾನ್ಸ್ ಪುರುಷರ ಬ್ಯೂಟಿ ಪಾರ್ಲರ್ ಗೆ ಬಂದಿದ್ದಾರೆ ಅಲ್ಲಿದ್ದ ಯುವಕನಿಗೆ ಕಟಿಂಗ್ ಮಾಡಲು ಹೇಳಿದ್ದಾರೆ ಅದಕ್ಕೆ ಬ್ಯೂಟಿ ಪಾರ್ಲರ್ ಯುವಕ ರಾತ್ರಿಯಾಗಿದೆ ಈಗ ಸಾಧ್ಯವಿಲ್ಲ ಬೆಳಗ್ಗೆ ಬನ್ನಿ ಎಂದು ವಿನಯದಿಂದ ಹೇಳಿದ್ದಾನೆ, ಅದಕ್ಕೆ ಬಂದಿದ್ದ ಇಬ್ಬರು ಯುವಕರು ಅದೆಲ್ಲ ಆಗುವುದಿಲ್ಲ ಈಗಲೆ ಕಟಿಂಗ್ ಮಾಡುವಂತೆ ಒತ್ತಾಯಿಸಿದ್ದಾರೆ ಯುವಕನೊಬ್ಬ ಕುರ್ಚಿಯಲ್ಲಿ ಕುಳಿತು ಬೆದರಿಸಿದ್ದಾನೆ ಪುಂಡ ಯುವಕರ ರೋಪಿಗೆ ಪಾರ್ಲರ್ ಯುವಕ ರಂಜಿತ್ “ಇಲ್ಲ ಇಲ್ಲ ಈಗಾಗಲೇ ತುಂಬಾ ತಡ ಆಗಿದೆ ಅಂಗಡಿ ಮುಚ್ಚಬೇಕು.ಬೇಕಾದರೆ ನಾಳೆ ಬೇಗ ಬನ್ನಿ ಎಂದಿರುತ್ತಾನೆ ಅದಕ್ಕೆ ಒಪ್ಪದ ಯುವಕರು ಈಗಲೇ ಮಾಡಬೇಕು ಎಂದು ರಂಪಾಟ ಮಾಡಿರುತ್ತಾರೆ ಅಂಗಡಿ ಯುವಕ ರಂಜಿತ್ ಮತ್ತು ಯುವಕರ ನಡುವೆ ಮಾತಿನ ಚಕಮುಖಿ ನಡೆದು ಪುಂಡ ಯುವಕರು ಪಾರ್ಲಾರ್ ಯುವಕ ರಂಜಿತ್ ನನ್ನು ಮುಷ್ಟಿಯಲ್ಲಿ ಗುದ್ದಿ ಗುದ್ದಿ ಮನಸೋ ಇಚ್ಚೆ ಥಳಿಸಿದ್ದಾರೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬೀಡದ ಯುವಕರು ಹಿಡಿದು ದಾಳಿ ನಡೆಸಿದ್ದಾರೆ ಕೊನೆಗೂ ಹರಸಾಹಸ ಪಟ್ಟು ತಪ್ಪಿಸಿಕೊಂಡ ರಂಜಿತ್ ಅಂಗಡಿಯಿಂದ ಹೋರ ಓಡಿ ಹೋಗಿದ್ದಾನೆ ಈ ಸಂದರ್ಭದಲ್ಲಿ ರಂಜಿತ್ ಟೀ ಶರ್ಟ್ ಹರಿದಿದೆ ಆದರೂ ಪೋಕರಿಗಳಿಂದ ತಪ್ಪಿಸಿಕೊಳ್ಳಲು ಅರಬೆತ್ತಲೆಯಲ್ಲಿ ಓಡಿಹೋಗಿ ಅಕ್ಕಪಕ್ಕದವರನ್ನು ಕರೆದು ತರುವಷ್ಟರಲ್ಲಿ ಇಬ್ಬರು ಪುಂಡರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ದಾಳಿಯ ದೃಶ್ಯಗಳು ಪಾರ್ಲರ್ ಅಂಗಡಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಪ್ರಕರಣ ಹನುಮಕೊಂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಮೀತಿ ಮೀರಿ ವರ್ತಿಸಿದ ಯುವಕರ ಗೂಂಡಾಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Breaking News
- SRINIVASAPURA ಹೂವಳ್ಳಿಕೃಷ್ಣಪ್ಪ ಕುಟುಂಬದಿಂದ ಗಣೇಶಮೂರ್ತಿ ವಿತರಣೆ.
- ಚಿಂತಾಮಣಿಯಲ್ಲಿ ಹೋಟೆಲ್ ಗೆ ನುಗ್ಗಿದ ಟಿಪ್ಪರ್ ಲಾರಿ ಇಬ್ಬರು ಸಾವು
- RAILWAY ರೈಲ್ವೆ ನಿಲ್ದಾಣದ ಕೂಲಿ IAS ಅಧಿಕಾರಿಯಾದ ಕಥೆ.
- SRINIVASAPURA ಪೋಲಿಸರೆಂದು ವೃದ್ಧೆ ಮಾಂಗಲ್ಯ ಎಗರಿಸಿರುವ ದುಷ್ಕರ್ಮಿಗಳು
- ಶ್ರೀನಿವಾಸಪುರದಲ್ಲಿ ಗುಜರಿ ಅಂಗಡಿಗೆ ಬೆಂಕಿ ಸುಟ್ಟು ಕರಕಲಾದ ಪ್ಲಾಸ್ಟಿಕ್
- ಕ್ರಿಕೆಟ್ ಚಂಡು ತಂದ ತಂಟೆ ಹೊತ್ತಿ ಉರಿದ ಆಂಧ್ರ V.KOTE
- ಪರಿಸರ ಪ್ರೇಮಿ ಶ್ರಮದಿಂದ ನೆಟ್ಟ ಗಿಡಗಳಿಗೆ ನರೇಗಾದಲ್ಲಿ (MGNREGA) ಅಕ್ರಮ ಬಿಲ್.
- ಚಿಂತಾಮಣಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
- ತಿರುಪತಿ ಲಡ್ಡು ತಯಾರಿಕೆಗೆ ಟ್ಯಾಂಕರನಲ್ಲಿ ಹೋದ ಕರ್ನಾಟಕದ ನಂದಿನಿ ತುಪ್ಪ
- ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರಕ್ಕೆ ಸಹಕರಿಸಿ ಪುರಸಭೆ ಅಧ್ಯಕ್ಷ ಭಾಸ್ಕರ್
Sunday, September 8