ಶ್ರೀನಿವಾಸಪುರ:ಹಣದ ವಿಚಾರವಾಗಿ ಕರ್ನಾಟಕದ ಇಬ್ಬರು ಆಂಧ್ರದ ರಾಮಸಮುದ್ರಂನಲ್ಲಿ ಜಗಳ ಆಡಿಕೊಂಡಿದ್ದು ನಂತರ ಊರಿಗೆ ವಾಪಸ್ಸು ಆಗಿದ್ದಾರೆ ಸಂಜೆ ಗ್ರಾಮದ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಮಾಡುವ ಸಲುವಾಗಿ ಇಬ್ಬರು ಸೇರಿಕೊಂಡು ಜಗಳ ಆಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಚಾಕುವಿನಿಂದ ಇರಿಯಲಾಗಿದ್ದು ಒರ್ವ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇಂದು ಸೋಮವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡದಿರುತ್ತದೆ.
ಮೃತನನ್ನು ಗುಂತವಾರಿಪಲ್ಲಿ ಮಂಜುನಾಥ್(32) ಎಂದು ಗುರತಿಸಲಾಗಿದೆ ಮೃತ ಮಂಜುನಾಥ್ ಹಾಗು ಕೂಳಗೂರ್ಕಿಯ ಶಿಮೂರ್ತಿ ಇಬ್ಬರು ಹಣಕಾಸು ವಿಚಾರವಾಗಿ ಆಂಧ್ರದ ರಾಮಸಮುದ್ರಂನಲ್ಲಿ ಇಂದು ಕಿತ್ತಾಡಿಕೊಂಡಿದ್ದಾರೆ ಇಬ್ಬರು ಊರಿಗೆ ವಾಪಸ್ಸು ಬಂದಿದ್ದಾರೆ ಮತೆ ತಡ ಸಂಜೆ ಇಬ್ಬರು ಸೋಮಯಾಜಲಹಳ್ಳಿ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಹೆಸರಿನಲ್ಲಿ ಸೇರಿದ್ದಾರೆ ಅಲ್ಲಿ ಮತ್ತೆ ಜಗಳ ಆಡಿಕೊಂಡಿದ್ದು ಪರಸ್ಪರ ತಳ್ಳಾಡಿಕೊಂಡಿದ್ದಾರೆ ಈ ಸಂದರ್ಬದಲ್ಲಿ ಶಿಮೂರ್ತಿ ಕೈಯಲ್ಲಿದ್ದ ಚಾಕುವಿನಿಂದ ಇರಿದಿದ್ದಾಗಿ ಹೇಳಲಾಗಿದ್ದು ಪೋಲಿಸರ ತನಿಖೆಯಲ್ಲಿ ಸತ್ಯಾಂಶ ಹೋರಬರಬೇಕಾಗಿದೆ.
ಶಿವಮೂರ್ತಿ ಮನೆಗೆ ಬೆಂಕಿ ಹಚ್ಚಲು ಮುಂದಾದ ಗುಂಪು
ಚಾಕು ಇರಿತದಿಂದ ಮಂಜುನಾಥ್ ಸಾವನಪ್ಪಿರುವ ಸುದ್ದಿ ಹರಡುತ್ತಿದ್ದಂತೆ ಮೃತ ಮಂಜುನಾಥ್ ಕಡೆಯವರು ಗುಂಪು ಗೂಡಿಕೊಂಡು ಕೂಳಗುರ್ಕಿಯಲ್ಲಿನ ಶಿಮೂರ್ತಿ ಮನೆ ಮೇಲೆ ದಾಳಿಮಾಡಿ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದು ಸಕಾಲದಲ್ಲಿ ಪೋಲಿಸರು ಆಗಮಿಸಿ ಗುಂಪನ್ನು ಚದುರಿದ್ದಾರೆ.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Monday, March 31