ನೂಜ್ ಡೆಸ್ಕ್:ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿ ಮದುವೆಯಾದ ಮೇಷ್ಟ್ರು ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.ಪ್ರೇಮಿಯ ಜೊತೆ ಹೋದ ಮಗಳ ನೆನೆದು ಕಣ್ಣೀರುಡುತ್ತಿರುವ ವಿದ್ಯಾರ್ಥಿನಿಯ ಪೋಷಕರು.
ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ ತಾಯಿಯೆ ಮೊದಲ ಗುರು ನಂತರ ಶಾಲೆ ಮೇಷ್ಟ್ರು ಆದರೆ ಇಲ್ಲೊಬ್ಬ ಶಿಕ್ಷಕ ತಾನು ಪಾಠ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರೇಮ ಪಾಠ ಹೇಳಿ ಪ್ರೀತಿಗೆ ಬೀಳಿಸಿಕೊಂಡು ಮದುವೆಯಾಗಿರುವ ಘಟನೆ
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ,ಸ್ಥಳೀಯ ಖಾಸಗಿ ಬಿಎಡ್ ಕಾಲೇಜು ಉಪನ್ಯಾಸಕ ಬೆಂಕಿಪುರದ ನಿವಾಸಿ ಯಶೋಧ್ ಕುಮಾರ್ ಹಾಗೂ ಕಾಲೇಜಿನ ಬಿ.ಎಡ್ ವಿಧ್ಯಾರ್ಥಿನಿ ಚಿಕ್ಕಹುಣಸೂರು ಸಜ್ಜೇಗೌಡರ ಪುತ್ರಿ ಪೂರ್ಣಿಮಾ ಮದುವೆ ಮಾಡಿಕೊಂಡಿದ್ದಾರೆ. ನಂತರ ರಕ್ಷಣೆಗಾಗಿ ಪೊಲೀಸರ ಮೊರೆಗೆ ಹೋಗಿದ್ದಾರೆ.
ಮಗಳನ್ನು ಶಿಕ್ಷಕಿಯನ್ನು ಮಾಡಬೇಕು ಎಂಬ ಕನಸುಕಂಡ ಬೀದಿ ಬದಿ ಸೊಪ್ಪು ವ್ಯಾಪಾರ ಮಾಡುವ ಸಜ್ಜೇಗೌಡ, ಸಾಲ ಸೋಲ ಮಾಡಿ ಮಗಳು ಪೂರ್ಣಿಮಾಳನ್ನು ನಗರದ ಖಾಸಗಿ ಡಿಎಡ್ ಕಾಲೇಜಿಗೆ ಸೇರಿಸಿದ್ದರು ಡಿಎಡ್ ಮುಗಿಸಿದ ಪೂರ್ಣಿಮಾ ಮನೆಯಲ್ಲಿದ್ದಳು. ಡಿಎಡ್ ವ್ಯಾಸಂಗ ಮಾಡುವಾಗಲೇ ತನಗೆ ಪಾಠ ಮಾಡುತ್ತಿದ್ದ ಮೇಷ್ಟ್ರೀಗೆ ಮನಸ್ಸು ಕೊಟ್ಟು ಇಬ್ಬರೂ ಪ್ರೀತಿಗೆ ಬಿದಿದ್ದರು ಇದು ಪೂರ್ಣಿಮಾಳ ಪೋಷಕರಿಗೆ ತಿಳಿದು ವಿರೋಧ ವ್ಯಕ್ತಪಡಿಸಿ ಬುದ್ದಿಹೇಳಿ ಎಚ್ಚರಿಸಿದ್ದರು.
ಕಾಲೇಜಿನಿಂದ ಸರ್ಟಿಫಿಕೇಟ್ ತರಲು ಹೋದವಳು
ಡಿ.26ರ ಗುರುವಾರ ಕಾಲೇಜಿನಿಂದ ಸರ್ಟಿಫಿಕೇಟ್ ತರಬೇಕಿದೆ ಎಂದು ಹೇಳಿ ಹೋದ ಪೂರ್ಣಿಮಾ,ಮನೆ ಬಾರದೆ ಇರುವುದು ನೋಡಿ ಅನುಮಾನಗೊಂಡ ಪೋಷಕರು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ದಾಖಲಿದ್ದರು ಇತ್ತ ಮನೆಯವರಿಗೆ ಕೈಕೊಟ್ಟ ಪುರ್ಣಿಮಾ ತನ್ನ ಪ್ರಿಯಕರನ ಯಶೋಧ್ ಕುಮಾರ್ ಜೊತೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಪೋಲಿಸ್ ಠಾಣೆಯಲ್ಲಿ ಪೋಷಕರಿಗೆ ಪಾಠ
ಈ ನಡುವೆ ಬಿಳಿಕೆರೆ ಪೋಲಿಸ್ ಠಾಣೆ ಪೋಲಿಸರು ಪ್ರೇಮಿಗಳನ್ನು ಠಾಣೆಗೆ ಕರೆಸಿ ಎರಡು ಕುಟುಂಬದವರನ್ನು ಕೂರಿಸಿಕೊಂಡು ಮಾತುಕತೆ ನಡೆಸಿದ್ದಾರೆ ಪ್ರೇಮಿಗಳಾಗಿದ್ದ ನಾವು ಪ್ರೀತಿಸಿ ಮದುವೆಯಾಗಿದ್ದೇವೆ ನಮಗೆ ರಕ್ಷಣೆ ನೀಡಿ ನಾವು ಒಟ್ಟಿಗೆ ಇರುತ್ತೇವೆಂದು ಪಟ್ಟು ಹಿಡಿದ ಪರಿಣಾಮ, ಪೊಲೀಸರು ಪೋಷಕರಿಗೆ ತಿಳುವಳಿಕೆ ಮೂಡಿಸಿ ವಿವಾಹ ನೋಂದಾಯಿಸಿಕೊಳ್ಳುವಂತೆ ಪ್ರೇಮಿಗಳಿಗೆ ಸೂಚಿಸಿ ಕಳುಹಿಸಿದ್ದಾರೆ.
Breaking News
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
Tuesday, April 15