ಶ್ರೀನಿವಾಸಪುರ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀನಿವಾಸಪುರ ಪಟ್ಟಣದಲ್ಲಿ ಯುಗಾದಿ ಹಬ್ಬದಂದು ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಸಪ್ತಮಾತೃಕೆಯರ ಪಲ್ಲಕಿ ಉತ್ಸವಳ ಜಾತ್ರಾ ಮಹೋತ್ಸವದಂದು ರಾತ್ರಿ ಕರಗ ನಡೆಸುವುದು ಇಲ್ಲಿ ಸಂಪ್ರದಾಯವಾಗಿದ್ದು ಈ ಬಾರಿ ಕರಗವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.
ವಿಜೃಂಭಣೆಯಿಂದ ನಡೆದ ಹಸಿ ಕರಗ
ಯುಗಾದಿಯಂದು ನಡೆಯುವ ಹಸಿಕರಗದ ಉತ್ಸವ ಯುಗಾದಿ ಮುನ್ನಾ ದಿನ ರಾತ್ರಿ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಿ ಆರಂಭವಾಯಿತು ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಿದ ಕಳಶದ ಆಕೃತಿಯ ಹಸಿಕರಗಕ್ಕೆ ಕರಗದ ಪೂಜಾರಿಗಳು ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು ಕರಗ ಹೊರಲಿರುವ ಕರಗದ ಪೂಜಾರಿ ಹೋಳೂರಿನ ವೆಂಕಟೇಶಪ್ಪ ಹಾಗು ಸಂಗಡಿಗರು ಹಸಿ ಕರಗ ಮಡಿಲಲ್ಲಿ ಇರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. ಶ್ರೀ ಚೌಡೇಶ್ವರಿ ದೇವಾಲಯದಿಂದ ಆರಂಭವಾದ ಹಸಿ ಕರಗ ಕಟ್ಟೆಕೆಳಗಿನ ಪಾಳ್ಯ ಅಲ್ಲಿನ ಶ್ರೀನಿವಾಸನ ದೇವಸ್ಥಾನ,ವಲ್ಲಭಾಯ್ ರಸ್ತೆ ಶಂಕರಮಠ ವೃತ್ತ ಹಳೇಪೇಟೆ ಮುಳಬಾಗಿಲು ವೃತ್ತ ಎಂ.ಜಿ.ರಸ್ತೆ ಸಾಗಿ ಕನ್ಯಾಕಪರಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕರಗಧಾರಿಗಳು ತಮಟೆ ಸದ್ದಿಗೆ ಹೆಜ್ಜೆ ಇಡುತ್ತ ಸಂಚರಿಸಿದರು.ಕರಗದ ಮುಂದೆ ಸಾಗಿದ ಕಿಲುಕುದರೆ ,ಆಂಧ್ರಪ್ರದೇಶದ ಬುಟ್ಟ ಬೊಮ್ಮಲು ಗಾರಡಿಗೊಂಬೆಗಳು, ದೇವರ ಮುಖವಾಡಗಳು ಹಾಗಿದ್ದ ಬೊಂಬೆಗಳ ನೃತ್ಯ ಸಂಭ್ರಮ ಜನಾಕರ್ಷಣೆಯಾಗಿತ್ತು.
ಶೃಂಗರಿಸಿದ್ದ ರಸ್ತೆಗಳು
ಹಸಿಕರಗ ಸಾಗಿ ಬಂದ ದಾರಿ ಉದ್ದಕ್ಕೂ ರಂಗೋಲಿ ಹಾಕಿ ವಿದ್ಯತ್ ದೀಪಾಲಂಕಾರ ಮಾಡಿ ತಳಿರು ತೋರಣಗಳಿಂದ ಶೃಂಗರಿಸಿ ಸಾರ್ವಜನಿಕರು ಹಸಿ ಕರಗವನ್ನು ಸ್ವಾಗತಿಸುವ ಮೂಲಕ ಹಸಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Wednesday, April 2