ನ್ಯೂಜ್ ಡೆಸ್ಕ್:ಎರಡು ದಿನಗಳ ಹಿಂದೆ ಮಧ್ಯರಾತ್ರಿ ಸಮಯದಲ್ಲಿ ತಿರುಮಲ ಬೆಟ್ಟದಲ್ಲಿ ಕರಡಿಯೊಂದು ಅಬ್ಬರಿಸಿದೆ. ಶ್ರೀ ವೆಂಕಟೇಶ್ವರ ಮ್ಯೂಸಿಯಂ ಹಿಂಭಾಗದ ಕಾಡಿನಿಂದ ಬಂದ ಕರಡಿ ಜಿಂದಾಲ್ ಅತಿಥಿ ಗೃಹದ ಬಳಿ ಒಡಾಡಿರುವುದನ್ನು ಕಂಡ ಅತಿಥಿ ಗೃಹದ ಸಿಬ್ಬಂದಿ ಭಯದಿಂದ ಒಳಗೆ ಓಡಿಹೋಗಿದ್ದಾರೆ ನಂತರ ಬಾರಿ ಶಬ್ದಗಳನ್ನು ಮಾಡಿದ ಹಿನ್ನಲೆಯಲ್ಲಿ ಕರಡಿ ಅರಣ್ಯದ ಕಡೆ ಓಡಿ ಹೋಗಿದಿಯಂತೆ, ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರಾರಂಭವಾದ ತಿರುಮಲ ಬೆಟ್ಟದಲ್ಲಿ ಹಾಗು ಮೆಟ್ಟಿಲು ಮಾರ್ಗವಾಗಿ ಹತ್ತಿಕೊಂಡು ಹೋಗುವ ದಾರಿಯಲ್ಲಿ ಇತ್ತಿಚಿಗೆ ಕಾಡು ಪ್ರಾಣಿಗಳು ಹಾಗು ಮೃಗಗಳು ಜನರ ಕಣ್ಣಿಗೆ ಕಾಣಿಸುವುದು ಶುರುವಾಗಿದ್ದೇ ಶುರುವಾಗಿದ್ದು ಇತ್ತಿಚಿಗೆ ಸಾಮನ್ಯವಾಗುತ್ತಿದೆ, ತೀರಾ ಇತ್ತಿಚಿಗೆ ಕಾಲು ದಾರಿಯಲ್ಲಿ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ನಡೆದು ಹೋಗುತ್ತಿದ್ದ ಬಕ್ತರನ್ನು ಅತಂಕಕ್ಕೆ ಈಡುಮಾಡಿತ್ತು.
ಆಂಧ್ರ-ತಮಿಳುನಾಡು ಗಡಿಯಲ್ಲಿ ಅನೆ ದಾಳಿ ಒರ್ವ ಸಾವು
ತಮಿಳುನಾಡು-ಆಂಧ್ರ ರಾಜ್ಯಗಳ ಗಡಿ ಭಾಗದ ಓಎನ್ ಕೊತ್ತೂರ್ ಬಳಿ ಆನೆ ದಾಳಿಗೆ ತಮಿಳುನಾಡಿನ ನಿವಾಸಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಕರ್ನಾಟಕದ ಗಡಿಗೂ ಸಮೀವೆ ಇರುವ ತಮಿಳುನಾಡಿನ ವೇಪನಪಲ್ಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಒಂದು ವಾರದಿಂದ ಐದು ಆನೆಗಳು ಬೀಡುಬಿಟ್ಟು ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು ರೈತರಿಗೆ ನಷ್ಟ ಉಂಟಾಗಿದೆ ಈ ಮದ್ಯೆ ಶನಿವಾರ ರಾತ್ರಿ ಜಮೀನಿಗೆ ತೆರಳುತಿದ್ದ ಏಕಲನಾಥಂ ಗ್ರಾಮದ ಗೋವಿಂದಪ್ಪ (45) ಹಾಗೂ ನಾಗರಾಜು ಮೇಲೆ ಆನೆಗಳ ಗುಂಪು ಅವರ ಮೇಲೆ ದಾಳಿ ಮಾಡಿದ್ದು, ಗೋವಿಂದಪ್ಪ ಸ್ಥಳದಲ್ಲೇ ಸಾವನ್ನಪ್ಪಿದರೆ ನಾಗರಾಜ್ ಗಾಯಗೊಂಡಿದ್ದು ಆತನನ್ನು ಸ್ಥಳೀಯರ ಸಹಾಯದಿಂದ ಕುಪ್ಪಂನ ಪಿಇಎಸ್ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಕೊಡಿಸಿದ್ದರಿಂದ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಡಿದಾಟಿ ಕರ್ನಾಟಕಕ್ಕೂ ಬರಬಹುದಾದ ಆನೆಗಳು
ತಮಿಳುನಾಡಿನ ಗಡಿಯಲ್ಲಿ ಅನೆದಾಳಿಯಿಂದ ವ್ಯಕ್ತಿ ಮೃತ ಪಟ್ಟಿರುವ ಹಿನ್ನಲೆಯಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಗಡಿಯಿಂದ ದಾಟಿಸಿ ಒಡಿಸಿದರೆ ಗಡಿದಾಟುವ ಅನೆಗಳು ಕರ್ನಾಟಕ ಅಥಾವ ಆಂಧ್ರಕಡೆಗೆ ಬರಬಹುದು ಎನ್ನುತ್ತಾರೆ ರೈತರು.
Breaking News
- ಶ್ರೀನಿವಾಸಪುರದಲ್ಲಿ ಜಮೀನು ವಿವಾದಕ್ಕೆ ಮಹಿಳೆ ಅತ್ಮಹತ್ಯೆ ಮಾಡಿಕೊಂಡರ?
- ಶ್ರೀನಿವಾಸಪುರದಲ್ಲಿ ಆಟೋಚಾಲಕರ ಪ್ರತಿಭಟನೆ
- 10 ಮತ್ತು 20 ರೂ. ನಾಣ್ಯಗಳನ್ನು ನಿರಾಕರಿಸಿದರೆ ಜೈಲು!
- ಶ್ರೀನಿವಾಸಪುರ ಹೈವೇ ರಸ್ತೆಯಲಿ ಸಂತೆ ವ್ಯಾಪಾರ!
- ಶ್ರೀನಿವಾಸಪುರದಲ್ಲಿ ಅದ್ದೂರಿ ಕೆಂಪೇಗೌಡ ಜಯಂತಿ
- ಕೋಲಾರದ ಸರ್ಕಾರಿ ಕಛೇರಿಗಳಲ್ಲಿ ಭರ್ಜರಿ ಬಾಡೂಟ ಬರ್ತಡೇ ಪಾರ್ಟಿ!
- ಲಿಂಗದ ರೂಪದಲ್ಲಿ ಭಕ್ತರ ಕೋರಿಕೆ ಈಡೇರಿಸುತ್ತಿರುವ ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ
- ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವು ಮಾರುಕಟ್ಟೆ ಕರ್ಮ ಕಾಂಡ!
- ಕೋವಿಡ್ ನಂತರದ ಹೃದಯಾಘಾತಕ್ಕೆ ಕೊರೊನಾ ಲಸಿಕೆ ನಿಶ್ಚಿತ ಕಾರಣವಲ್ಲ ತಜ್ಞರ ಅಭಿಪ್ರಾಯ
- ಶಪಥ ಈಡೇರಿಸಿಕೊಂಡು ಆಂಧ್ರ ಅಸೆಂಬ್ಲಿಗೆ ಕಾಲಿಟ್ಟ ಮುಖ್ಯಮಂತ್ರಿ ಚಂದ್ರಬಾಬು
Sunday, July 7