ಶ್ರೀನಿವಾಸಪುರ:ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಕಟ್ಟಿದ್ದ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಪಂಚಾಯತಿ ಸಿಬ್ಬಂದಿ ತೆರವು ಗೊಳಿಸಿ ಅವುಗಳನ್ನು ಗ್ರಾಮದ ಸ್ಮಶಾನದಲ್ಲಿ ಎಸೆದು ಉದ್ದಟತನ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮದ ಮನೆಗಳ ಮೇಲೆ ಕಟ್ಟಿದ್ದ ಕೇಸರಿ ಧ್ವಜ ರಾಮನ ಭಾವಚಿತ್ರದ ಪ್ಲೆಕ್ಸ್ಗಳನ್ನು ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಶನಿವಾರ ತರಾತುರಿಯಲ್ಲಿ ತೆರವು ಮಾಡಿದ ಪಂಚಾಯಿತಿ ಸಿಬ್ಬಂದಿ ಸ್ಮಶಾನಕ್ಕೆ ಎಸೆದಿದ್ದಾರೆ ಎಂದು ತಾಲೂಕಿನ ಅಡ್ಡಗಲ್ ಪಂಚಾಯತಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ತೆರವು ವಿಚಾರ ರಾದ್ದಾಂತವಾಗುತ್ತಿದ್ದಂತೆ ಗೌವನಪಲ್ಲಿ ಠಾಣ ಪೋಲಿಸರು ತಕ್ಷಣ ಗ್ರಾಮಕ್ಕೆ ಆಗಮಿಸಿ ಪಂಚಾಯಿತಿ ಅಧಿಕಾರಿ ಹಾಗು ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಕೂರಿಸಿ ಮಾತನಾಡಿ ಸ್ಮಶಾನಕ್ಕೆ ಎಸೆದಿದ್ದ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಅಲ್ಲಿಂದ ತೆರವು ಮಾಡಿ ಗ್ರಾಮಸ್ಥರ ಸಲಹೆಯಂತೆ ನೀರಿನಲ್ಲಿ ವಿಸರ್ಜಿಸಲು ಸೂಚಿಸಿದ್ದಾಗಿ ಪೋಲಿಸರು ಹೇಳುತ್ತಾರೆ.
ತೆರುವಿಗೆ ಎರಡು ತಿಂಗಳು ಬೇಕಾಯಿತ?
ಇವುಗಳನ್ನು ತೆರವು ಮಾಡಲು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಎರಡು ತಿಂಗಳು ಬೇಕಾಯಿತ ಎಂದು ಪ್ರಶ್ನಿಸುವ ಗ್ರಾಮದ ಯುವಕರು ಇದು ಇಲ್ಲಿನ ಪಂಚಾಯಿತಿ ಅಧಿಕಾರಿ ಹಾಗು ಸಿಬ್ಬಂದಿ ಬೇಜವಬ್ದಾರಿ ನಡವಳಿಕೆಯ ಪರಿಣಾಮ ಗ್ರಾಮದಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವಂತಿದೆ ಎನ್ನುತ್ತಾರೆ.
Breaking News
- SRINIVASAPURA ಹೂವಳ್ಳಿಕೃಷ್ಣಪ್ಪ ಕುಟುಂಬದಿಂದ ಗಣೇಶಮೂರ್ತಿ ವಿತರಣೆ.
- ಚಿಂತಾಮಣಿಯಲ್ಲಿ ಹೋಟೆಲ್ ಗೆ ನುಗ್ಗಿದ ಟಿಪ್ಪರ್ ಲಾರಿ ಇಬ್ಬರು ಸಾವು
- RAILWAY ರೈಲ್ವೆ ನಿಲ್ದಾಣದ ಕೂಲಿ IAS ಅಧಿಕಾರಿಯಾದ ಕಥೆ.
- SRINIVASAPURA ಪೋಲಿಸರೆಂದು ವೃದ್ಧೆ ಮಾಂಗಲ್ಯ ಎಗರಿಸಿರುವ ದುಷ್ಕರ್ಮಿಗಳು
- ಶ್ರೀನಿವಾಸಪುರದಲ್ಲಿ ಗುಜರಿ ಅಂಗಡಿಗೆ ಬೆಂಕಿ ಸುಟ್ಟು ಕರಕಲಾದ ಪ್ಲಾಸ್ಟಿಕ್
- ಕ್ರಿಕೆಟ್ ಚಂಡು ತಂದ ತಂಟೆ ಹೊತ್ತಿ ಉರಿದ ಆಂಧ್ರ V.KOTE
- ಪರಿಸರ ಪ್ರೇಮಿ ಶ್ರಮದಿಂದ ನೆಟ್ಟ ಗಿಡಗಳಿಗೆ ನರೇಗಾದಲ್ಲಿ (MGNREGA) ಅಕ್ರಮ ಬಿಲ್.
- ಚಿಂತಾಮಣಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ
- ತಿರುಪತಿ ಲಡ್ಡು ತಯಾರಿಕೆಗೆ ಟ್ಯಾಂಕರನಲ್ಲಿ ಹೋದ ಕರ್ನಾಟಕದ ನಂದಿನಿ ತುಪ್ಪ
- ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರಕ್ಕೆ ಸಹಕರಿಸಿ ಪುರಸಭೆ ಅಧ್ಯಕ್ಷ ಭಾಸ್ಕರ್
Sunday, September 8