ಶ್ರೀನಿವಾಸಪುರ:ಜಮೀನು ವ್ಯಾಜ್ಯದ ಹಿನ್ನಲೆಯಲ್ಲಿ ದೌರ್ಜನ್ಯದಿಂದ ವಿಧವೆ ಮಹಿಳೆಗೆ ಸೇರಿದ ಮನೆ ತಗಡಿನ ಶೇಡ್ ಮತ್ತು ಕಾಂಪೌಂಡ್ ಗೊಡೆಯನ್ನು ನೆಲಕ್ಕುರಳಿಸಿರುವ ಘಟನೆ ಗುರುವಾರ ಮಧ್ಯರಾತ್ರಿ ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ನಡೆದಿದ್ದು ಈ ಕುರಿತಾಗಿ ಶ್ರೀನಿವಾಸಪುರ ಠಾಣೆಯಲ್ಲಿ ದೂರುದಾಖಲಾಗಿದ ದೌರ್ಜನ್ಯಕ್ಕೆ ಒಳಗಾದ ವಿಧವೆ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಕುರಿತಾಗಿ ವಿಧವೆ ಮಹಿಳೆ ವಿಜಯಮ್ಮ ಅವರ ಮಗ ರಮೇಶ್ ಕುಮಾರ್ ಹಾಗು ಮೈದುನ ಶ್ರೀನಿವಾಸಶೆಟ್ಟಿ ಮಾಹಿತಿ ನೀಡಿದ್ದು ರೈಲ್ವೇ ಉದ್ಯೋಗಿಯಾಗಿದ್ದ ನಮ್ಮ ಅಣ್ಣ ಪಾಳ್ಯದ ನಾಗರಾಜು ತಮ್ಮ ಪತ್ನಿ ವಿಜಯಮ್ಮನ ಹೆಸರಿಗೆ 1986 ರಲ್ಲಿ 1 ಕುಂಟೆ (33×33)ಜಮೀನು ಖರಿದಿಸಿ ಅಲ್ಲಿ ಚಿಕ್ಕದಾಗಿ ಮನೆ ನಿರ್ಮಿಸಿಕೊಂಡು ಪಕ್ಕದ ಜಾಗದಲ್ಲಿ ರೆಕ್ ಶೇಡ್ ಹಾಕಿಕೊಂಡಿದ್ದು ನೀರಿನ ತೊಟ್ಟಿ ನಿರ್ಮಿಸಿ ಕಾಂಪೌಂಡ್ ಹಾಕಿಕೊಂಡಿದ್ದ ಅವರು ಅಲ್ಲೆ ವಾಸಿಸುತ್ತಿದ್ದರು.
ಇತ್ತಿಚಿಗೆ ಪಕ್ಕದ ಜಮೀನಿನ ಮಾಲಿಕರಾದ ಮೊಗಿಲಹಳ್ಳಿ ಗ್ರಾಮದ ನರೇಶ್ ಮತ್ತು ಮಂಜುನಾಥರೆಡ್ಡಿ ಜಮೀನು ಅಳತೆ ವಿಚಾರದಲ್ಲಿ ತಕರಾರು ತಗೆದು ಜಮೀನು ಸರ್ವೆ ಮಾಡಿಸಿ ನಿಮ್ಮ ಜಮೀನು ಉತ್ತರ ದಕ್ಷಿಣದ ಅಳತೆಯಲ್ಲಿದೆ ಹಾಗಾಗಿ ನಮಗೆ ಪೂರ್ವ ಪಶ್ಚಿಮದಲ್ಲಿ ಜಮೀನು ಬರುತ್ತದೆ ಎಂದು ವಾದಿಸಿದ್ದರು ನಂತರದಲ್ಲಿ ಊರಿನ ಮುಖಂಡರ ಸಮ್ಮುಖದಲ್ಲಿ ಎರಡು ಮೂರು ಬಾರಿ ನ್ಯಾಯ ಪಂಚಾಯ್ತಿ ನಡೆಯಿತು ಈಗ್ಗೆ ಒಂದು ತಿಂಗಳ ಹಿಂದೆ ಮಾತುಕತೆ ನಡೆದು ಜಗಳ ಮಾಡಿಕೊಳ್ಳದೆ ಕೂತು ಮಾತನಾಡಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು ಪಂಚಾಯಿತಿ ಮುಖಂಡರ ಮಾತಿಗೆ ಗೌರವ ನೀಡಿ ನಾವು ಯಾವುದೆ ಕಾನೂನು ಸಮರಕ್ಕೆ ಮುಂದಾಗಿರಲಿಲ್ಲ.
ಮಧ್ಯರಾತ್ರಿ ಗೂಂಡಾಗಳನ್ನು ಕರೆ ತಂದು ಧ್ವಂಸ
ಗುರುವಾರ ನಮ್ಮ ಅತ್ತಿಗೆ ಒಬ್ಬರೆ ಮನೆಯಲ್ಲಿದ್ದಾಗ ಅದೂ ಮಧ್ಯರಾತ್ರಿ ಸಮಯದಲ್ಲಿ ಗೂಂಡಾಗಳೊಂದಿಗೆ ಆಗಮಿಸಿದ ಪಕ್ಕದ ಜಮೀನಿನ ಮಾಲಿಕರಾದ ನರೇಶ್ ಮತ್ತು ಮಂಜುನಾಥರೆಡ್ಡಿ ಹಾಗು ಇತರರು ಜೆಸಿಬಿ ತಂದು ಮನೆಯ ಪಕ್ಕದಲ್ಲಿ ಹಾಕಿದ್ದ ರೇಕ್ ಶೇಡ್ ಮತ್ತು ಕಾಂಪೌಂಡ್ ಗೊಡೆಯನ್ನು ಕೆಡವಿ ಹಾಕಿದ್ದಾರೆ ಮನೆಯ ಬಳಿ ಸದ್ದು ಕೇಳಿ ಹೋರಗೆ ಬಂದಂತ ನಮ್ಮ ಅತ್ತಿಗೆ 75 ವರ್ಷದ ಮಹಿಳೆ ಮೇಲೆ ದೌರ್ಜನ್ಯ ನಡೆಸಿದಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಗಲು ಬರಬಹುದಿತ್ತಲ್ವಾ
ನ್ಯಾಯಕ್ಕೆ ಬರುವ ಹಾಗಿದ್ದರೆ ನರೇಶ್ ಮತ್ತು ಮಂಜುನಾಥರೆಡ್ಡಿ ಪ್ರಾಮಾಣಿಕರಾಗಿ ನಾಲ್ಕು ಜನರ ಮುಂದೆ ಹಗಲು ಬಂದು ನ್ಯಾಯೋಚಿತವಾಗಿ ಸಾಧಿಸಬಹುದಿತ್ತಲ್ಲ ಅದು ಬಿಟ್ಟು ಮಧ್ಯರಾತ್ರಿ ಬಂದು ವಿಧ್ವಂಸ ಸೃಷ್ಟಿಸುವ ಅವಶ್ಯಕತೆ ಎನಿತ್ತು ಎಂದು ವಿಧವೆ ಮಹಿಳೆ ವಿಜಯಮ್ಮನ ಮಗ ರಮೇಶ್ ಕುಮಾರ್ ಹೇಳುತ್ತಾರೆ.
Breaking News
- ಮಾಲೂರಿನ ಬೈರನದೊಡ್ಡಿ ನಗರೇಶ್ವರ ದೇವಾಲಯ ಲೋಕಾರ್ಪಾಣೆ
- ಚಿಂತಾಮಣಿ-ಮದನಪಲ್ಲಿ ರಸ್ತೆ ಖಾಸಗಿ ಬಸ್ ಡಿಕ್ಕಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ!
- ಅವಿಭಜಿತ ಕೋಲಾರ ಜಿಲ್ಲೆಯ ರೈತರಿಗೆ ನಿರಾಶದಾಯಕ ಬಜೆಟ್ ಎಲ್ಲೆಡೆ ಟೀಕೆ!
- ಮಾವುಬೆಳೆಗಾರರಿಗೆ ಏನೂ ಘೊಷಿಸದ ಸಿದ್ದರಾಮಯ್ಯ sweet 16 ಬಡ್ಜೆಟ್.
- ಶ್ರೀನಿವಾಸಪುರ ಜನರಿಂದ ಸಿದ್ದರಾಮಯ್ಯ ಬಜೆಟ್ ಮೇಲೆ ಭಾರೀ ನೀರಿಕ್ಷೆ!
- ಜೆಡಿಎಸ್ CMR ಶ್ರೀನಾಥ್ ಮನೆಗೆ ಪೇಜಾವರ ಸ್ವಾಮಿಜಿ ಭೇಟಿ!
- ಬುಲೆಟ್ ಬೈಕುಹತ್ತಿ ಪೋಲಿರೈಡ್ ಮಾಡಿದ್ದ LOVER ಬಂಧನ!
- ಕಾಂಗ್ರೆಸ್ ಮಂತ್ರಿ ವಿರುದ್ದ ಅರಣ್ಯ ಭೂಮಿ ಒತ್ತುವರಿ ಆರೋಪ
- ಶ್ರೀನಿವಾಸಪುರ:ವಿಧವೆ ಮನೆಶೆಡ್ ಕಾಂಪೌಂಡ್ ದೌರ್ಜನ್ಯದಿಂದ ಧ್ವಂಸ ಆರೋಪ
- ಶ್ರೀನಿವಾಸಪುರ:ಶಿವರಾತ್ರಿ ಸಂಭ್ರಮ ಅರಕೇರಿ ನಾಗನಾಥೇಶ್ವರನಿಗೆ ರಥೋತ್ಸವ
Wednesday, March 12